ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಮಹಾಡ್ ಕಡೆಗೆ ನಮ್ಮ ಹೋರಾಟದ ನಡಿಗೆ ವಿಚಾರ ಸಂಕಿರಣವನ್ನು ಅಧೀಕ್ಷಕ ಅಭಿಯಂತರ ಸುರೇಶ ಶರ್ಮಾ ಉದ್ಘಾಟಿಸಿದರು.
ಸಂಗಾನಂದ ಭಂತೇಜಿ, ಮಲ್ಲಿಕಾರ್ಜುನ ಕ್ರಾಂತಿ, ಡಾ.ಐ.ಎಸ್.ವಿದ್ಯಾಸಾಗರ, ಅಶ್ವಿನಿ ಮದನಕರ್, ಅರ್ಜುನ ಭದ್ರೆ, ಮಹಾಂತೇಶ ಬಡದಾಳ, ಡಾ.ಮಲ್ಲಿಕಾರ್ಜುನ ಆಶನಾಳ, ಮಲ್ಲಿಕಾರ್ಜುನ ಖನ್ನಾ, ಮರೆಪ್ಪ ಹಳ್ಳಿ ಇದ್ದರು.