ರಾವೂರ ಆರೋಗ್ಯ ಕೇಂದ್ರಕ್ಕೆ ವೀರಣ್ಣ ಯೋಗ ಶಿಕ್ಷಕ

0
45

ವಾಡಿ: ಸಮೀಪದ ರಾವೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರು ಯೋಗ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ.

ಕರ್ನಟಕ ಸರಕಾರದ ಪ್ರಸಕ್ತ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಯೋಜನೆಯ ಸಿಪಿಎಚ್‌ಸಿ-ಯುಎಚ್‌ಸಿ ಕಾರ್ಯಕ್ರಮದಡಿ ರಾವೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುತ್ತಿಗೆ ಆಧಾರಾದಡಿ ಯೋಗ ತರಬೇತಿ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ವಾಡಿ ಪಟ್ಟಣದ ವೀರಣ್ಣ ಬಸವರಾಜ ಯಾರಿ ಅವರು ಯೋಗ ತರಬೇತಿದಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Contact Your\'s Advertisement; 9902492681

ಮಾಸಿಕ ಗೌರವಧನ ರೂ.೫೦೦೦ ನೀಡಲಾಗುವುದು ಎಂದು ಜಿಲ್ಲಾ ಸಮೀಕ್ಷಣಾಧಿಕಾರಿಗಳು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here