ಕಲಬುರಗಿ: ನಗರದ ಸತ್ಯಂ ಪಿಯುಸಿ ಕಾಲೇಜಿನಲ್ಲಿ ಬಸವಣ್ಣನವರ ಜಯಂತ್ಯೋತ್ಸದ ನಿಮಿತ್ತ ಕಾಲೇಜಿನ ಪ್ರಾಂಶುಪಾಲರಾದ ಬಿ ಎಚ್ ನಿರಗುಡಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ ಕೈಲಾಸವೆಂದು ಸಾರಿದ ಮಹಾಮಾನವತಾವಾದಿ, ಭಕ್ತಿಭಂಡಾರಿ, ವಿಶ್ವಗುರು ಸಾಮಾಜಿಕ ಸುಧಾರಕರಾದ ಬಸವಣ್ಣನವರ ಚಿಂತನೆಗಳು ಹಾಗೂ ಅವರ ವಿಚಾರಧಾರೆಗಳು ಜೀವನದಲ್ಲಿ ಅಳವಡಿಸಿ ಕೊಂಡರೆ ನಮ್ಮ ಜೀವನ ಸಾರ್ಥಕ ಹಾಗೂ ಯಶಸ್ವಿಯಾಗುತ್ತದೆ ಎಂದು ಹೇಳಿದ್ದರು.
ಸಂಸ್ಥೆ ಯ ಟ್ರಸ್ಟಿ ಗಳಾದ ನಾಗರಾಜ್ ಕುಮಸಿ ಹಾಗೂ ಉಪನ್ಯಾಸಕರಾದ ಡಾ ಕಾಶಿನಾತ ಕಣಜೆ,ಉಮೇಶ್ ಚೌದರಿ ಉಪಸ್ಥಿತರಿದ್ದರು.