ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಶುಕ್ರವಾರ ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಗ್ರಾಮದಲ್ಲಿನ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಧ್ವಜಾರೋಹಣ ನೇರವೇರಿಸಲಾಯಿತು.
ಈ ಸಂಧರ್ಭದಲ್ಲಿ ಬಸವ ಧಳದ ಮುಖಂಡ ಲಕ್ಷ್ಮಿಕಾಂತ ದುಗೊಂಡ ಮಾತನಾಡಿ, ಬಸವಣ್ಣನವರು ಮಹಾನ್ ಮಾನವತಾವಾದಿ, ತಮ್ಮ ಅನುಭವ ಮಂಟಪದಲ್ಲಿ ಎಲ್ಲರಿಗೂ ಸರಿಸಮಾನವಾದ ಅವಕಾಶ ಮಾಡಿ ಕೊಡುವ ಮೂಲಕ ಸಮಾನತೆಯ ಮಹತ್ವವನ್ನು ಅಂದೇ ಸಾರಿದರು. ಬಸವಣ್ಣನವರ ತತ್ವ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.
ಈ ಸಂಧರ್ಭದಲ್ಲಿ ಬಸವ ಧಳದ ಮುಖಂಡ ಲಕ್ಷ್ಮಿಕಾಂತ ದುಗೊಂಡ, ಅಮೃತ ಬಿಬ್ರಾಣಿ, ಸಾತಣ್ಣ ಮಂಟಗಿ, ಕ.ರ.ವೇ ಅಧ್ಯಕ್ಷ ಬಸವರಾಜ ಯಳಸಂಗಿ, ಮೋಹನ್ ನಿರ್ಮಲ್ಕರ, ಭಾಗಣ್ಣ ದುಗೊಂಡ, ನಾಗರಾಜ್ ಮಾಲಿಪಾಟೀಲ್, ರಾಮಚಂದ್ರ ದುಗೊಂಡ, ಚಂದ್ರಕಾಂತ ಮಠಪತಿ, ಮಲ್ಲನಾಥ ನಾಟೀಕಾರ, ಹಣಮಂತ ಹುಗಾರ, ಶರಣು ಬೆಳ್ಳಿ, ಅಂಬರೀಷ್ ಒಂಟಿ,ಸೋಮಣ್ಣ ನಾಗುರ, ಶಿವುಕುಮಾರ ಮಠಪತಿ, ಧರ್ಮಣ್ನ ಮಗ್ಗಿ, ಮಡಿವಾಳಪ್ಪ ಮಡಿವಾಳ, ಸಾಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.