ಶಹಾಬಾದ: ನಗರಸಭೆಯ ಪೌರ ಕಾರ್ಮಿಕರಿಗೆ ಕೊರೊನಾ ಸೊಂಕು ತಗುಲಿರುವುದು ನಿಜ.ಆದರೆ ನನಗೆ ಸೊಂಕು ತಗುಲಿರುವುದಿಲ್ಲ. ನನ್ನ ಸಹದ್ಯೋಗಿ ಮಿತ್ರರು ಯಾವುದೇ ಆರಂಕ ಪಡುವ ಅವಶ್ಯಕತೆಯಿಲ್ಲ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ತಿಳಿಸಿದ್ದಾರೆ.
ಈಗಾಗಲೇ ನಗರಸಭೆಯ ಆರೋಗ್ಯ ನಿರೀಕ್ಷಕರೊಬ್ಬರಿಗೆ ಹಾಗೂ ಪೌರಕಾರ್ಮಿಕರಿಗೆ ಸೊಂಕು ದೃಢಪಟ್ಟಿದೆ. ಇವರಿಗೆ ಯಾವುದೇ ಅಂತಹ ಲಕ್ಷಣಗಳಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ನಗರಸಭೆಯ ಆರೋಗ್ಯ ನಿರೀಕ್ಷಕರು ನನ್ನ ಸಂಪರ್ಕದಲ್ಲಿರುವುದರಿಂದ ಮುಂಜಾಗೃತ ಕ್ರಮವಾಗಿ ಹೋಮ್ ಐಸೋಲೇಷನ್ಗೆ ಒಳಗಾಗಿದ್ದೆನೆ.
ಒಂದು ವೇಳೆ ಸೊಂಕು ತಗುಲಿದ್ದರೇ ನನ್ನ ಸಹದ್ಯೋಗಿ ಮಿತ್ರರಿಗೂ ನನ್ನಿಂದ ಸೊಂಕು ಹರಡಬಾರದು ಎಂಬ ಕಾರಣಕ್ಕೆ ಹೋಮ್ ಐಸೋಲೇಷನ್ಗೆ ಒಳಗಾಗಿದ್ದೆನೆ. ಅಲ್ಲದೇ ನಾನು ಆರೋಗ್ಯವಾಗಿದ್ದೆನೆ. ನನಗೆ ಸೊಂಕು ದೃಢಪಟ್ಟಿಲ್ಲ.ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಪೌರಾಯುಕ್ತರು ತಿಳಿಸಿದ್ದಾರೆ.