ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ವಾರ್ಡ ನಂ.೧ರಲ್ಲಿ ಗ್ರಾಪಂ ಸದಸ್ಯ ಶರಣಗೌಡ ದಳಪತಿ ವಾರ್ಡನ ಅರವತ್ತು ಕಡು ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಶರಣಪ್ಪ ದಳಪತಿ, ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಲಾಕ್ಡೌನ್ ಮಾಡಲಾಗಿದೆ.ಕೆಲಸಕ್ಕಾಗಿ ದೂರದಿಂದ ಬಂದ ಜನರಿಗೆ ದುಡಿಯಲು ಕೆಲಸವಿಲ್ಲ. ಕೈಯಲ್ಲಿ ಹಣವಿಲ್ಲ.ಇದರಿಂದ ಬಡವರಿಗೆ ಕಷ್ಟದ ಬದುಕು ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಇದ್ದ ದುಡ್ಡು ಖಾಲಿಯಾಗಿದೆ.ಇಂತಹ ಅನೇಕ ಕುಟುಂಬಗಳಿಗೆ ಆಹಾರ ತಯ್ಯಾರು ಮಾಡಿ ನೀಡಿದರೇ ಒಂದು ದಿನದ ಮಟ್ಟಿಗೆ ಆಗಬಹುದು.ಅದರ ಬದಲಿಗೆ ಸ್ವಲ್ಪ ಆಹಾರ ಪದಾರ್ಥಗಳನ್ನು ನೀಡಿದರೇ ಅವರೇ ಆಹಾರವನ್ನು ಮಾಡಿಕೊಂಡು ಊಟ ಮಾಡುತ್ತಾರೆ ಎಂಬ ಆಲೋಚನೆಯಿಂದ ಆಹಾರ ಕಿಟ್ ವಿತರಿಸಿದ್ದೆನೆ.ನನ್ನ ವಾರ್ಡ ನನ್ನ ಜನರಿಗೆ ತೊಂದರೆಯಲ್ಲಿದ್ದಾಗ ಸಹಾಯ ಹಸ್ತ ಚಾಚುವುದು ಒಬ್ಬ ಚುನಾಯಿತ ಜನಪ್ರತಿನಿಧಿಯಾದ ನನ್ನ ಕರ್ತವ್ಯ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮುನ್ನಾ ಪಟೇಲ್ ಹಾಗೂ ಮಹೇಶ ಧರಿ ಮಾತನಾಡಿ, ಲಾಕ್ಡೌನನಿಂದ ಬಹಳಷ್ಟು ಕುಟುಂಬಗಳು ತೊಂದರೆಗೆ ಒಳಗಾಗಿವೆ. ಆ ಕಡುಬಡವರಿಗೆ ಆಹಾರ ವಿತರಿಸುವ ಒಳ್ಳೆ ಕೆಲಸಕ್ಕೆ ನಾವು ಕೈ ಜೋಡಿಸಿದ್ದೆವೆ. ಬಹಳಷ್ಟು ಜನರಲ್ಲಿ ಶ್ರೀಮಂತಿಕೆ ಇದೆ.ಆದರೆ ಕೊಡುವ ಹೃದಯ ಇಲ್ಲ. ಕೊಡುವ ಮತ್ತು ನೀಡುವ ಹೃದಯವಂತರು ಮುಂದೆ ಬಂದರೆ ಬಡ ಜನರ ಸಂಕಷ್ಟ ಸ್ವಲ್ಪ ಮಟ್ಟಿಗಾದರೂ ತಗ್ಗಬಹುದು. ಪ್ರತಿಯೊಂದು ಪ್ರದೇಶದಲ್ಲಿ ದಾಸೋಹ ಮಾಡುವ ಜನರು ಹೆಚ್ಚಾಗಲಿ ಎಂಬುದೇ ನಮ್ಮ ಆಶಯ ಎಂದು ಹೇಳಿದರು.
ಅಕ್ಕಿ-೫ ಕೆಜಿ,ಜೋಳ-೫ಕೆಜಿ, ಉಪ್ಪು-೧ಕೆಜಿ, ಎಣ್ಣೆ-೧ ಕೆಜಿ, ಖಾರ ಒಳಗೊಂಡ ಆಹಾರ ಪದಾರ್ಥಗಳ ಕಿಟ್ನ್ನು ೬೦ ಕಡು ಬಡವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಶರಣಗೌಡ ಎಲ್ಐಸಿ, ರಾಜು ಬೊಮ್ಮನಳ್ಳಿ, ಮಲ್ಲು ಖೇನಿ, ರಮೇಶ ಹಡಪದ ಸೇರಿದಮತೆ ಅನೇಕರು ಇದ್ದರು.