ಸುರಪುರ: ಯಾದವ ಸಮುದಾಯದ ಯುವ ಮುಖಂಡ ಪ್ರಕಾಶ ವಿ.ಯಾದವ್ ಅವರ ಜನುಮ ದಿನದ ಅಂಗವಾಗಿ ಯಾದವ (ಗೊಲ್ಲರ) ಸಂಘ ಸುರಪುರ ಇವರ ವತಿಯಿಂದ ನಗರದಲ್ಲಿನ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ಗುರುವಾರ ಬೆಳಿಗ್ಗೆಯಿಂದಲೂ ರಂಗಂಪೇಟೆ ಹಾಗು ಸುರಪುರದ ವಿವಿಧ ವಾರ್ಡ್ಗಳಲ್ಲಿನ ಬಡ ಕುಟುಂಬಗಳಿಗೆ ಅವರ ಮನೆ ಬಾಗಿಲಿಗೆ ಹೋಗಿ ಅಕ್ಕಿ ಬೇಳೆ ಎಣ್ಣೆ ಮತ್ತಿತರೆ ದಿನಸಿ ಪದಾರ್ಥದ ಕಿಟ್ ವಿತರಿಸಿ ಜನರು ಮನೆಯಿಂದ ಹೊರಗೆ ಬರಬೇಡಿ ಮನೆಯಲ್ಲೆ ಇರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಯಾದವ್ ನಾಗರಾಜ ಸೇಡಂ ಶಾಂತಪ್ಪ ಮಾಲಗತ್ತಿ ರಮೇಶ ಡೊಳ್ಳೆ ವಿರೇಶ ಪಂಚಾಂಗಮಠ ಹಣಮೇಶ ಯಾದವ್ ಅಯ್ಯಪ್ಪ ವಗ್ಗಾಲಿ ಯಲ್ಲಪ್ಪ ಕಚಕನೂರ ಮಲ್ಲಪ್ಪ ಮಂಗ್ಯಾಳ ಕೃಷ್ಣ ಸೇಡಂ ಜೆ.ಎಸ್.ಆರ್.ಯಾದವ್ ನಾಗು ಶೆಟ್ಟಿ ಚಂದಪ್ಪ ಎಲಿತೋಟ ಗೌಡ ಶೇಬೈ ಸೇರಿದಂತೆ ಅನೇಕರಿದ್ದರು.