ಸುರಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳೆ ಹಾಗು ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅವರ ೪೭ನೇ ಜನುಮ ದಿನದ ಅಂಗವಾಗಿ ತಾಲೂಕಿನ ಆಲ್ದಾಳ ಗ್ರಾಮದ ಸ್ಮಶಾನದಲ್ಲಿ ಸರಳವಾಗಿ ಜನುಮ ದಿನ ಆಚರಣೆಯೊಂದಿಗೆ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ರಾಜಾ ರೂಪಕುಮಾರ ನಾಯಕ ಅವರು,ಗ್ರಾಮೀಣ ಜನರಲ್ಲಿ ವೈಚಾರಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಜನರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿರುವುದು ಮುಖ್ಯವಾಗಿದೆ ಎಂದರು.
ಆನುಮ ದಿನ ಆಚರಿಸಿಕೊಂಡು ರಮೇಶ ದೊರೆ ಮಾತನಾಡಿ,ನಮ್ಮ ಗ್ರಾಮೀಣ ಭಾಗದ ಜನರು ದೆವ್ವ ಭೂತ ಮೂಢನಂಬಿಕೆಗಳಿಗೆ ಬಲಿಯಾಗಿ ಕಂದಾಚಾರ ಆಚರಣೆಯ ಮೂಲಕ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಬದಕುತ್ತಾರೆ.ಆದ್ದರಿಂದ ಈ ಜನರಲ್ಲಿ ಮೂಢನಂಬಿಕೆಯನ್ನು ದೂರಗೊಳಿಸು ನಿಟ್ಟಿನಲ್ಲಿ ಇಂದು ನಮ್ಮೆಲ್ಲ ಬೆಂಬಲಿಗರು ಇಂತಹ ಕಾರ್ಯಕ್ರಮ ನಡೆಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ಅಲ್ಲದೆ ಲಾಕ್ಡೌನ್ನಿಂದಾಗಿ ಅನೇಕ ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು,ಅಂತಹ ಕುಟುಂಬಗಳಿಗೆ ನೆರವಾಗಲೆಂದು ದಿನಸಿ ಕಿಟ್ ಮತ್ತು ಮಾಸ್ಕ್ ಹಾಗು ಸ್ಯಾನಿಟೈಜರ್ ವಿತರಣೆ ಮಾಡುವ ಮೂಲಕ ಕೊರೊನಾ ಕುರಿತು ಜಾಗೃತಿಯನ್ನು ಮೂಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಪಂಡೀತಪ್ಪ ಆರಾಧ್ಯ ಶ್ರೀಗಳು ಸಿಂಧಗಿಮಠ ಹಾಗು ಪಲ್ಲಕೆಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಗಂಗಾಧರ ನಾಯಕ ತಿಂಥಣಿ ಮಾನಪ್ಪ ಸಾಹುಕಾರ ಶರಣು ನಾಯಕ ಬೈರಿಮರಡಿ ವೆಂಕಟೇಶ ನಾಯಕ ಬೈರಿಮರಡಿ ಮಂಜುನಾಥ ನಾಯಕ ಬೈರಿಮರಡಿ ರವಿಕುಮಾರ ನಾಯಕ ಬೈರಿಮರಡಿ ರಂಗಪ್ಪ ನಾಯಕ ಮಂಜುನಾಥ ವಕೀಲ ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಣ್ಣ ಕಿಲ್ಲೇದಾರ ತಿರುಪತಿ ಹುದ್ದಾರ ಶಿವಕುಮಾರ ಉಪನ್ಯಾಸಕರು ಹಾಗು ನಿಂಗಯ್ಯ ಕಿಲ್ಲೇದಾರ ಸೇರಿದಂತೆ ರಮೇಶ ದೊರೆ ಆಲ್ದಾಳ ಕುಟುಂಬಸ್ಥರು ಉಪಸ್ಥಿತರಿದ್ದರು.