ಕಲಬುರಗಿ: ವಿದ್ಯಾನಗರ ಶ್ರೀ ಕೃಷ್ಣ ಮಂದಿರ, ಹನುಮ ಭೀಮ ಮಧ್ವರ ದೇವಸ್ಥಾನ ಹಾಗೂ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದ ಸಿಬ್ಬಂದಿ ವರ್ಗದವರಿಗೆ ಕೋವಿಡ ಸಂಕಷ್ಟದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಹಾಗೂ ನಿರ್ದೇಶಕರಾದ ಜಗದೀಶ್ ಹುನಗುಂದ ಇವರ ಮಾರ್ಗದರ್ಶನದಲ್ಲಿ ಗುರುರಾಜ ಭರತನೂರ ಮತ್ತು ವಿಶ್ವಾಸ್ ಮೋಘೇಕರ್ ಇವರ ಸಹಯೋಗದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಕೃಷ್ಣ ಮಂದಿರ ಹಾಗೂ ನಿಲಯದ ಮೇಲ್ವಿಚಾರಕರಾದ ವಿದ್ಯಾಸಾಗರ ಕುಲಕರ್ಣಿ ರೇವೂರ್ ಸೇರಿದಂತೆ ಬಡಾವಣೆಯ ಪ್ರಮುಖರಾದ ಅಜೀತಕುಮಾರ್ ಕೊಪ್ಪಳಕರ ಹಾಗೂ ಇತರರು ಇದ್ದರು.