ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ : ವಿಜಯಕುಮಾರ ಹುಲಿ ಹರ್ಷ ವ್ಯಕ್ತಪಡಿಸಿದ್ದಾರೆ

0
16

ಕಲಬುರಗಿ: ವಿಧಾನಸೌಧದ ಆವರಣದಲ್ಲಿ ಮಹಾತ್ಮ ಬಸವೇಶ್ವರರ ಪುತ್ಥಳಿ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿಯ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ ಹುಲಿ ಹರ್ಷ ವ್ಯಕ್ತಪಡಿಸಿದ್ದಾರೆ.

೧೨ನೇ ಶತಮಾನದಲ್ಲಿ ಸಮಾನತೆಗಾಗಿ ಶ್ರಮಿಸಿದ ಮಹಾನ ಸಮಾಜ ಸುಧಾರಕ ಬಸವೇಶ್ವರರ ಪುತ್ಥಳಿ ನಿಮೀಸುತ್ತಿರುವುದು ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಮಹಾಮಾನವತಾವಾದಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂಪ್ಪನವರ ಸರಕಾರ ನೀಡುತ್ತಿರುವ ಶ್ರೇಷ್ಠ ಗೌರವಾಗಿದೆ.

Contact Your\'s Advertisement; 9902492681

ನಾಡಿನ ಐಕ್ಯತೆಗಾಗಿ ಜಗತ್ತಿನ ಒಳಿತಿಗಾಗಿ ರಚಿಸಿರುವ ಬಸವ ತತ್ವಗಳನ್ನು ಸಾರಲು  ಕೈಗೊಂಡಿರುವ ಈ ಯೋಜನೆ ಐತಿಹಾಸಿಕ ಮತ್ತು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಿದೆ. ವೀರಶೈವ ನಿಗಮ ಮಂಡಳಿ ರಚನೆ ಮಾಡಿದಂತೆ (ಓಬಿಸಿ) ವರ್ಗಕ್ಕೆ  ವೀರಶೈವ ಲಿಂಗಾಯತ ಸಮಾಜ ತಾವು ಸೇರ್ಪಡೆಮಾಡುತ್ತೀರಿ ಎಂಬ ನಂಬಿಕೆ ಸಮಾಜಕ್ಕೆ ಇದೆ. ಯಾವಾಗಲು ವೀರಶೈವ ಲಿಂಗಾಯತ ಸಮಾಜ ತಮ್ಮ ಜೋತೆಗಿದೆ ಎಂದು ಬಿಜೆಪಿಯ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ ಹುಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here