ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಮಹಾವಿದ್ಯಾಲಯಗಳ ನಡೆದ ಸ್ನಾತಕ ಪರೀಕ್ಷಾ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಿದ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದರು.
ಗುರುವಾರ ಆರಂಭಗೊಂಡಿರುವ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪರೀಕ್ಷಾ ಕೇಂದ್ರಗಳ ವೀಕ್ಷಣೆಗಾಗಿ ನಗರದ ಬಸವ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದಾಗ ನಕಲು ಮಾಡುತ್ತಿದ್ದ ಮೂರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದರು.
ಕೋವಿಡ್-೧೯ರ ನಂತರದಲ್ಲಿ ಪರೀಕ್ಷೆಗಳನ್ನು ನಡೆಸುವದೇ ಕಷ್ಟವಾಗಿದ್ದ ಕಾಲದಲ್ಲಿ ಸ್ನಾತಕ ಪರೀಕ್ಷೆಗಳನ್ನು ನಡೆಸುವ ತೀರ್ಮಾನ ಮಾಡಿರುವುದರಿಂದ ೨೦೨೦-೨೧ರ ಸಾಲಿನ ಪರೀಕ್ಷೆಗಳು ದಿನಾಂಕ ೦೫.೦೮.೨೦೨೧ ರಂದು ಆರಂಭಗೊಂಡವು. ಅಂದು ಬೆಳಗಿನ ಅವಧಿಯ ಪ್ರಥಮ ಸೆಮಿಸ್ಟರ್ ರಾಜ್ಯಶಾಸ್ತ್ರ, ಮೂರನೆಯ ಸೆಮಿಸ್ಟರ್ ಇತಿಹಾಸ ವಿಷಯದ ಪರೀಕ್ಷೆಗಳು ಜರುಗಿದವು. ಮಧ್ಯಾಹ್ನ ೨ ರಿಂದ ೫ ಗಂಟೆಗೆಯ ವರೆಗೆ ನಡೆದ ಸ್ನಾತಕ ಐದನೆಯ ಸೆಮಿಸ್ಟರ್ ರಾಜ್ಯಶಾಸ್ತ್ರ, ಕನ್ನಡ, ಸಂಸ್ಕೃತ ಹಾಗೂ ಮರಾಠಿ ಪತ್ರಿಕೆಗಳ ಪರೀಕ್ಷೆ ಮಾನ್ಯ ಕುಲಪತಿಗಳ ನೇತೃತ್ವದಲ್ಲಿ ಸುಸೂತ್ರವಾಗಿ ನಡೆದವು.