ಕಲಬುರಗಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜನ್ಮದಿನದ ನಿಮಿತ್ಯ ನಾಳೆ ದಿನಾಂಕ 31.10.21ರಂದು ರವಿವಾರ ಬೆಳಿಗ್ಗೆ ಸರಿಯಾಗಿ 9.30 ಗಂಟೆಗೆ ಸರದಾರ ಪಟೇಲ್ ವೃತದಲ್ಲಿ ಉಕ್ಕಿನ ಮನುಷ್ಯ ದೇಶದ ಮೊದಲನೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಸರದಾರ ವಲ್ಲಭಭಾಯ್ ಪಟೇಲ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಗುವದು ಎಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಅಖಂಡ ಭಾರತದ ನಿರ್ಮಾಪಕರು ಮಹಾನ ರಾಷ್ಟ್ರ ಭಕ್ತರು ಹಾಗೂ ದೇಶದ ಜನತೆಗೆ ರಾಷ್ಟೀಯ ಪಾಠ ಕಲಿಸಿದ ವಿಶ್ವ ನಾಯಕರಾದ ಭಾರತ ರತ್ನ ಡಾ.ಪಟೇಲ್ ಈ ನಮನ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಸಂಘ ಸಂಸ್ಥೆ ಸಂಘಟನೆಗಳ ಮುಖಂಡರು, ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ನಾಗರಿಕ ಸರಿಯಾದ ಸಮಯಕ್ಕೆ ಹಾಜರಾಗಿ ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಸಲು ಕೋರಲಾಗುತ್ತದೆ.