ಕಲಬುರಗಿ: ಫರತಾಹಬಾದ ಗ್ರಾಮದಲ್ಲಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ಕನಾಟಕ ರಾಜ್ಯೋತ್ವವ ಕಾರ್ಯಕ್ರಮಕ್ಕೆ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನದಿಸಿನ್ನೂರಿನ ಮಹಾಲಕ್ಷ್ಮೀ ದೇವಿ ಶಕ್ತಿಪೀಠದ ಪೀಠಾಧಿಪತಿ ಶ್ರೀ ಗುರುದೇವ ಶರಣರು, ಶ್ರೀ ವಿಶಾಲ ಮುತ್ಯಾ, ಶ್ರೀ ಹುಣಚಿರಾಯ ಮುತ್ಯಾ, ಕಿರುತೆರೆ ನಟಿ ಮೋಕ್ಷಿತಾ ಪೈ, ವೇದಿಕೆಯ ಜಿಲ್ಲಾಧ್ಯಕ್ಷ ಸಂತೋಷ ಎಸ್.ತಳವಾರ, ಸಿಪಿಐ ರಾಘವೇಂದ್ರ, ಮಾಜಿ ತಾ.ಪಂ.ಅಧ್ಯಕ್ಷ ಶಿವರಾಜ ಸಜ್ಜನ್, ಹುಣಚಿರಾಯ ಸೀತನೂರ, ಸುರೇಶ ತಿಬಶೇಟ್ಟಿ, ಮೊಹ್ಮಮದ್ ಖಾಜಾ, ಲಕ್ಷ್ಮೀಕಾಂತ ಜಮಾದಾರ, ಧರ್ಮಣ್ಣ ಕಟ್ಟಿ, ಅಂಬ್ರೇಷ ಉಣಚಿ, ಮಲ್ಲಿಕಾರ್ಜುನ ಗುಡಬಾ, ಚನ್ನಬಸಪ್ಪ ಸಜ್ಜನ್ ಹಾಗೂ ವೇದಿಕೆಯ ಕಾರ್ಯಕರ್ತರು ಇದ್ದರು.