ಕಲಬುರಗಿ: ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್ ಗೆ ಅವರಿಗೆ ಫೀರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಫೀರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಕಾರ್ಯಕರ್ತರು ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತಿದೆ. ಬುತ್ ಮಟ್ಟದಲ್ಲಿ ಒಗಟು ಇಲ್ಲದಂತಾಗಿದೆ ಎಂದು ಪರಿಸ್ಥಿತಿ ವಿವರಿಸಿದರು.
ಉಪಾಧ್ಯಕ್ಷರಾದ ಹಸನ್ ಅಲಿ ಸುಲ್ತಾನಪುರಿ, ಕಾರ್ಯದರ್ಶಿ ಸಾಜಿದ್ ಅಲಿ, ಖಜಾಂಚಿ ನಿಜಾಮೊದ್ದೀನ್ ಸಿದ್ದಿಖಿ, ಎಂ.ಕೆ ಬಾಬಾ, ಮಕಸುದ್ ಸೇರಿದಂತೆ ಹಲವರು ಇದ್ದರು.