ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ೩೬ ನೇ ಪುಣ್ಯತಿಥಿ ನಿಮಿತ್ಯ ನಗರದ ಟೌನ್ ಹಾಲ್ ಬಳಿ ಪ್ರತಿಮೆಗೆ ಶಾಸಕ ಪ್ರಿಯಾಂಕ ಖರ್ಗೆ ಅವರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ, ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ನಾಟೇಕರ, ಮುಖಂಡರಾದ ಸಂತೋಷ ಬಿಲಗುಂದಿ, ಮಜರಆಲಂ ಖಾನ್, ಡಾ.ಕಿರಣ ದೇಶಮುಖ, ರಾಜೀವ ಜಾನೆ, ಪರಮೇಶ್ವರ ಖಾನಪೂರ, ಸಿದ್ಧಾರ್ಥ ಕೋರವಾರ ಹಾಗೂ ಕಾರ್ಯಕರ್ತರು ಇದ್ದರು.