ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ೩೬ ನೇ ಪುಣ್ಯತಿಥಿ ನಿಮಿತ್ಯ ನಗರದ ಟೌನ್ ಹಾಲ್ ಬಳಿ ಪ್ರತಿಮೆಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದಸರಥ ಕಲಗುರ್ತಿ, ರಾಜು ಎಸ್.ಕಟ್ಟಿಮನಿ, ಅಂಬಾರಾಯ ಬೆಳಕೋಟಾ, ರಮೇಶ ವಾಡೇಕರ್, ಸಚಿನ ಕಟ್ಟಿಮನಿ ಇದ್ದರು.