ಕಲಬುರಗಿ: ಶ್ರೀ ಸಿದ್ಧರಾಮಯ್ಯ ಅವರ ೭೫ನೇ ಅಮೃತ ಮಹೋತ್ಸವ ನಿಮಿತ್ತ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ ದಕ್ಷಿಣ ಮತಕ್ಷೇತ್ರದ ವತಿಯಿಂದ ಕಲಬುರಗಿಯಿಂದ ದಾವಣಗೆರೆ ಚಲೋ ಬಸ್ಸುಗಳಿಗೆ ಚಾಲನೆ ನೀಡಲಾಯಿತು.
ಮಾಜಿ ಮೇಯರ್ ಶರಣಕುಮಾರ ಮೋದಿ, ಮುಖಂಡರಾದ ನಿಲಕಂಠರಾವ ಮೂಲಗೆ, ಬಾಬು ಒಂಟಿ, ಲಿಂಗರಾಜ ಕಣ್ಣಿ, ಸಂತೋಷ ಪಾಟೀಲ ದಣ್ಣೂರ, ಅಶೋಕ ವೀರನಾಯಕ, ಲಾಲ ಅಮ್ಮದ್ ಬಾಂಬೆಸೇಠ, ಶರಣಗೌಡ ಅಲ್ಲಮಪ್ರಭು ಪಾಟೀಲ, ರಾಜೀವ ಜಾನೆ, ಈರಣ ಝಳಕಿ, ಧರ್ಮರಾಜ ಹೇರೂರ, ಸೋಮಶೇಖರ ಹಿರೇಮಠ ಹಾಗೂ ಕಾರ್ಯಕರ್ತರು ಇದ್ದರು.