ಕಲಬುರಗಿ: ನಗರದ ಕನ್ನಡ ಭವನದಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ೭೫ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಭರತನಾಟ್ಯ, ಜಾನಪದ ಸಂಗೀತ, ಸುಗಮ ಸಂಗೀತ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ್ವರ್ಣ ಸಿನಿಮಾದ ಸಾಹಿತಿ ಅಭಯಹಸ್ತ ಮಾತನಾಡಿ ಕಲಬುರಗಿ ಕಲಾವಿದರು ಯಾವುದರಲ್ಲಿ ಕಮ್ಮಿ ಇಲ್ಲ ರಂಗಭೂಮಿ ನಾಟಕ ಧಾರವಾಹಿ ಸಿನಿಮಾಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕಲಬುರಗಿಯವರು ನಿರ್ಮಾಣ ಮಾಡಿರುವ ಸ್ವರ್ಣ ಸಿನಿಮಾದಲ್ಲಿ ಶೇಕಡ ೭೦ರಷ್ಟು ಜನ ಕಲಾವಿದರು ಕಲಬುರಗಿಯವರೇ ಎಂಬುದು ಸಂತೋಷದ ವಿಷಯ ಈ ಸಿನಿಮಾದ ಒಂದು ಹಾಡಿಗೆ ಸಾಹಿತ್ಯ ಬರೆಯೊಕೆ ನನಗೆ ಅವಕಾಶ ಕೊಟ್ಟ ಯಲೀಷ್ ಸಿಂಹ ಅವರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ಸುಗುರ್, ಸಚಿನ ಪರಹತಾಬಾದ, ಭಿಮರಾಯ ನಗನೂರ, ಪಿರಪ್ಪ ರೇವನೂರ, ಭಾರತಿ ಗುತ್ತೇದಾರ, ಎಂ.ಬಿ ನಿಂಗಪ್ಪ, ಪ್ರಕಾಶ ತಳಕೇರಿ, ಸಾಗರ ಜಾಧವ, ಮೋಹನ ಸಾಗರ, ಪ್ರಕಾಶ ವಗ್ಗೆ, ಮಮತಾ, ಯಲೀಷ್ ಸಿಂಹ ಇತರರು ಇದ್ದರು.