ಕಲಬುರಗಿ: ಸಿ.ಪಿ.ಐ ಶ್ರೀಮಂತ ಇಲ್ಲಾಳ ರವರ ಮೇಲೆ ಗಾಂಜಾ ಮಾಫಿಯಾದ ಸುಮಾರು 40 ರಿಂದ 50 ಜನ ದುಸ್ಕರ್ಮಿಗಳಿಂದ ಮರಣಾಂತಿಕ ಹಲ್ಲೆ ಮಾಡಲಾಗಿದ್ದು ಇದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ,ರವಿಗೊಂಡ ಕಟ್ಟಿಮನಿ, ಮಲ್ಲಿಕಾರ್ಜುನ ಮಾಡಾಬುಲ್ಳ ಪರಮೇಶ್ವರ ಆಲಗೂಡ ರವಿ ಪೂಜಾರಿ, ಪ್ರಕಾಶ್ ಕಾಚರೆ, ಶರಣು ಬೇಲೂರು ಇದ್ದರು.