ಕಲಬುರಗಿ: ಅಕ್ಕಿ ಕಳತನ, ಕ್ರಿಮಿನಲ್ ಚಟುವಟಿಕೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗೆ ಕಲಬುರಗಿ ಪೊಲೀಸರು ಒಂದು ವರ್ಷ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಮಣಿಕಂಠ್ ರಾಠೋಡ್ ಮೇಲೆ ನಿರಂತ ಪ್ರಕರಣ ದಾಖಲಾಗುತ್ತಿದ್ದು, ಕೋರ್ಟ್ ನಿಂದ ಜಾಮೀನು ಪಡೆದು ಮತ್ತೆ ಅದೇ ಕ್ರಿಮಿನಲ್ ಕೃತ್ಯದಲ್ಲಿ ಮುಂದುವರೆಸುತ್ತಿದ್ದ ಹಿನ್ನೆಲೆಯಲ್ಲಿ ಈತನನ್ನು ಒಂದು ವರ್ಷ ಕಡಿಪಾರು ಮಾಡಿ ಶಿವಮೊಗ್ಗ ಜಿಲ್ಲೆಯ ಗ್ರಾಮಂತರ ಠಾಣೆ ವ್ಯಾಪ್ತಿಯಲ್ಲಿ ಪ್ರತಿದಿನ ಠಾಣೆಗೆ ಹೋಗಿ ಸಹಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಗಡಿಪಾರು ಆದೇಶ ಪ್ರಶ್ನಿಸಿ ಮಣಿಕಂಠ್ ಕೋರ್ಟ್ ಮೆಟಿಲ್ಲೂ ಏರಿದ್ದಾರೆ ಎಂದು ತಿಳಿದಬಂದಿದೆ.