ಆನೇಕಲ್: ಗಂಧದನಾಡು ಜನಪರ ವೇದಿಕೆ ಹಾಗೂ ಲಯನ್ಸ್ ಕ್ಲಬ್ ಆಫ್ ಚಂದಾಪುರ ನೊಬೆಲ್ ಸಹಯೋಗದಲ್ಲಿ ಭಾನುವಾರದಂದು “ನಾಯಕತ್ವ ತರಬೇತಿ ಶಿಬಿರ”ವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಹೋರಾಟಗಾರರಾದ ಜಿಗಣಿ ಶಂಕರ್, ಬದುಕು ಕಮ್ಯುನಿಟಿ ಕಾಲೇಜಿನ ಮುರಳಿ ಮೋಹನ್ ಕಾಟಿ, ವಕೀಲರಾದ ಪುರುಷೋತ್ತಮ್, ನಾಯಕತ್ವ ತರಬೇತಿ ಶಿಬಿರದ ನೇತೃತ್ವ ವಹಿಸಿದ್ದ ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ ಮತ್ತು ಲಯನ್ಸ್ ಕ್ಲಬ್ ಆಫ್ ಚಂದಾಪುರ ನೋಬೆಲ್ ಅಧ್ಯಕ್ಷರಾದ ಸುರೇಶ್ ಬಿಜುರ್ ಹಾಜರಿದ್ದರು.