ಕಲಬುರಗಿ: ಹೋರಾಟ ರತ್ನ ಮಾರುತಿ ಮಾನಪಡೆ ರವರ 2 ನೇ ಪುಣ್ಯ ಸ್ಮರಣೆ ಪ್ರಯುಕ್ತ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ಮಾರುತಿ ಮಾನಪಡೆ ರವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಮುಖಂಡರಾದ ಬಸವರಾಜ ಪಾಟೀಲ್, ಶಿವಾನಂದ ಕವಲಗಾ, ಜಗನ್ನಾಥರೆಡ್ಡಿ ಚಟ್ನಳ್ಳಿ, ನಾಗರಾಜ ಭಂಗೂರ, ಜೈಭೀಮ ಕಟ್ಟಿಮನಿ, ಸಿದ್ದಣಗೌಣ, ಮಾರುತಿ ಸುಗ್ಗಾ, ಮಲಕಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು.