ಕೆಂಭಾವಿ:ಹೆಣ್ಣು ಅಬಲೆಯಲ್ಲ ಸಬಲೆ. ಹೆಣ್ಣು ಪುರುಷರಿಗಿಂತಲೂ ಯಾವದರಲ್ಲಿಯೂ ಕಮ್ಮಿ ಇಲ್ಲ. ಅಡುಗೆ ಮಾಡುವದಕ್ಕೂ ಬದ್ಧ, ಯುದ್ದಕ್ಕೂ ಸಿದ್ಧ ಎಂದು ತೋರಿಸಿಕೊಟ್ಟವರಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ಅಗ್ರರು ಎಂದು ಹಿರಿಯ ಮುಖಂಡ ಸಂಗಣ್ಣ ತುಂಬಗಿ ಹೇಳಿದರು.
ಭಾನುವಾರ ವೀರರಾಣಿ ಕಿತ್ತೂರ ಚೆನ್ನಮ್ಮಳ 199 ನೆ ಜಯಂತಿ ಅಂಗವಾಗಿ ಪಟ್ಟಣದ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಿತ್ತೂರ ಚನ್ನಮ್ಮಳ ಸ್ನೇಹಮಯಿ ಜೀವನ, ಧೈರ್ಯ ಸಾಹಸ ಕಾರ್ಯಗಳು ನಮ್ಮ ಭಾರತ ದೇಶದ ಪ್ರತಿಯೊಬ್ಬ ಮಹಿಳೆಗೆ ಆದರ್ಶಪ್ರಾಯವಾಗಿದೆ. ಚೆನ್ನಮ್ಮಳ ಜಯಂತಿ ದಿನವನ್ನು ವಿಜಯೋತ್ಸವ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.
ಮುಖಂಡರಾದ ಪ್ರಕಾಶ (ಗುಂಡುಗೌಡ) ಯಾಳಗಿ, ಶಿವಣ್ಣ ಬಳಬಟ್ಟಿ, ರವಿ ಸೊನ್ನದ, ಶ್ರೀಶೈಲ ಮಲ್ಕಾಪುರ, ಬಸವರಾಜ ಅಂಗಡಿ, ವಿಕಾಸ ಸೊನ್ನದ, ಶರಣಗೌಡ, ಭೀಮು ಮಲ್ಕಾಪುರ, ಚಂದ್ರು ಮನಗೂಳಿ, ಆನಂದ ಆಶಿಂಗಾಳ, ಸೋಮನಾಥ, ಗೌಡಪ್ಪಗೌಡ, ಸಿದ್ದು ಬೈಚಬಾಳ, ಮಂಜು ದೇಸಾಯಿ, ಬಸ್ಸು ಆಶಿಂಗಾಳ, ಸುರೇಶ ತೋಟದ, ಮಹೇಶ ಅಂಗಡಿ, ರೇವಣಸಿದ್ದಯ್ಯ, ಉಮೇಶರೆಡ್ಡಿ, ಹಳ್ಳೆಪ್ಪ, ಸುಭಾಸ, ಸಂತೋಷ, ಹನೀಫ್, ಮಂಜು ತುಂಬಗಿ, ಸತ್ಯರಾಜ, ವೀರೇಶ ಬಂಡೋಳಿ ಸೇರಿದಂತೆ ಇತರರಿದ್ದರು.