ಕಲಬುರಗಿ: ವಿವಿದುದೇಶ ಸಮಾಜ ಸೇವಾವಿವಿಧ ಉದ್ದೇಶ ಸಮಾಜ ಸೇವಾ ಸಮಿತಿ ವತಿಯಿಂದ ಬುಧವಾರ ನಗರ ಅಂಜುಮನ್ ಸಭಾಂಗಣದಲ್ಲಿ ಉರ್ದು ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊ. ಹಮೀದ್ ಸುಹೇರವರ್ದಿ, ಪತ್ರಕರ್ತ ಹಕೀಂ ಶಾಕೀರ್, ಅಂಜುಮನ್ ತಾರಕಿ ಉರ್ದು ಹಿಂದ್ ಅಧ್ಯಕ್ಷ ಪೀರಜಾದ ಫಹೀಂ, ಉಪನ್ಯಾಸಕ ಅನೀಸ್ ಸಿದ್ದಿಕಿ, ಸಾದಿಕ್ ಅಲಿ ಸಾಹಿತಿ, ಮುಜೀಬ್ ಖಾನ್ ಫಿಲ್ತ್ರಿ ಮಟ್ಟು ನಿಖತ್ ಫಾತಿಮಾ ಸೇರಿದಂತೆ 43 ಜನರಿಗೆ ಡಾ. ಅಲ್ಲಮ ಮೊಹಮ್ಮದ್ ಇಕ್ಬಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಉದ್ಘಾಟಿಸಿದರು. ಸಾಜೀದ್ ರಂಜೋಳ್ವಿ ಅಧ್ಯಕ್ಷತೆ ವಹಿಸಿದರು. ಅಹಮರು ಉಲ್ ಇಸ್ಲಾಂ, ನ್ಯಾಯವಾದಿ ಜಬ್ಬಾರ ಗೋಲಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು.