ಸುರಪುರ:ರೂಪ್ಸ್ ಕರ್ನಾಟಕ ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ನಗರದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನಾಗಿ,ಶರಣಪ್ಪ ಗೆಣ್ಣೂರ ಗೌರವಾಧ್ಯಕ್ಷ,ಲಂಕೆಪ್ಪ ಕವಲಿ ಅಧ್ಯಕ್ಷ,ಬಲಭೀಮ ನಾಯಕ ದೇವಾಪುರ,ಅಮರಯ್ಯಸ್ವಾಮಿ ಜಾಲಿಬೆಂಚಿ ಉಪಾಧ್ಯಕ್ಷರು,ಸೋಮಶೇಖರ ಶಾಬಾದಿ ಕಾರ್ಯಾಧ್ಯಕ್ಷ,ಶಿವರಾಜ ನಾಯಕ ಪ್ರಧಾನ ಕಾರ್ಯದರ್ಶಿ,ಅಪ್ಪಣ್ಣ ಕುಲಕರ್ಣಿ ಸಹ ಕಾರ್ಯದರ್ಶಿ,ಸುಭಾಸ ಆಲಿಹಾಳ,ರಾಮಣ್ಣ ಹೂಗಾರ್ ಸಂಘಟನಾ ಕಾರ್ಯದರ್ಶಿಗಳು,ನಿಂಗಣ್ಣ ಪೂಜಾರಿ,ಹಣಮಂತ ಪೂಜಾರಿ ಖಜಾಂಚಿಗಳನ್ನಾಗಿ ನೇಮಕಗೊಳಿಸಲಾಯಿತು.
ಸಭೆಯಲ್ಲಿ ರೂಪ್ಸ ರಾಜ್ಯ ಕಾರ್ಯದರ್ಶಿ ಕೆ.ವಿ ಮಹೇಶ್ವರಪ್ಪ,ವಾಸುದೇವ ಅರಕೇರಿ,ಅನೀಫ್,ಮುರಳಿಧರ,ಮಹೇಶ ಹೊಸ್ಮನಿ,ಅಶೋಕ ಚಿನ್ನಾಕಾರ,ಮಾನಯ್ಯ ಗುತ್ತೇದಾರ,ಸತೀಶ ಖಾದಿ,ಚಂದ್ರು ಮಾಡಹಳ್ಳಿ,ಕಲ್ಯಾಣಗಿರಿ ಜಾಧವ,ವಿನಾಯಕ ಭಟ್ಟ,ಶೇಖರ ಹೆಬ್ಬಾಳ,ನಾನಾಗೌಡ,ಅಂಬ್ರೇಶ ಪೂಜಾರಿ,ಶಿವರಾಜ ಕುಂಬಾರ,ಮಹೇಶ ಜಾಗಿರದಾರ,ಸಾಹೇಬರಡ್ಡಿ ನಾಯಕ,ಕನಕಾಚಲ ಜಾಗಿರದಾರ ಇದ್ದರು.