ಕಲಬುರಗಿ: ನಗರದ ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಪದ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿ 2022-23ನೇ ಸಮಾರಂಭವನ್ನು ಶರಣಬಸವೇಶ್ವರ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ್ ಅವರು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ನಂತರ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಸೋಲು ಗೆಲುವು ಎನ್ನದೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನೂತನ ವಿದ್ಯಾಲಯ ಸಂಸ್ಥೆಯ ಡಾ. ಸಿದ್ದಾಪುರಕರ ಮಾತನಾಡಿ ಹಾಕಿ ಪಂದ್ಯಾವಳಿಯನ್ನು ಕಲಬುರಗಿಯಲ್ಲ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಅದ್ಯಕ್ಷತೆ ವಹಿಸಿದ್ದ ಉಪನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ ಮಾತನಾಡಿ ಎಲ್ಲಾ ಕ್ರೀಡಾ ಪಟುಗಳು ಶಿಸ್ತಿನ ರೀತಿ ಯಲ್ಲಿ ಆಟ ವಾಗಲು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಆರ್ಯನ ಕಾಲೇಜಿನ ಬಜರಂಗ್ ಸಿಂಗ್, ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ, ಉಪನ್ಯಾಸಕ ಸಂಘದ ಅಧ್ಯಕ್ಷರಾದ ಜೆ ಮಲ್ಲಪ್ಪ, ಅನುದಾನಿತ ಕಾಲೇಜುಗಳ ಉಪಾಧ್ಯಕ್ಷರಾದ ಬಿ ಎಸ್ ಮಾಲೀ ಪಾಟೀಲ, ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿಗಳಾದ ಚಂದ್ರಶೇಖರ ದೊಡಮನಿ, ಪ್ರಾಚಾರ್ಯರುಗಳಾದ ಮಲ್ಲೇಶಿ ನಾಟೇಕಾರ, ಮೊಹಮ್ಮದ್ ಅಲ್ಲಾವುದ್ದೀನ್ ಸಾಗರ, ಡಿ ಸಿ ಚೌವ್ಹಾಣ್, ಆಯಿಶಾ ನಸೀಮ, ಡಾ ಸುಜಾತಾ ಎಂ, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಶಾಖಾಧಿಕಾರಿ ಹಾಗೂ ವೀಕ್ಷಕರು ಆಶಾ ರಾಣಿ, ಕಲಬುರಗಿ ಕಛೇರಿ ಶಾಖಾಧಿಕಾರಿ ಜ್ಯೋತಿ ಕುಲಕರ್ಣಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು, ವ್ಯವಸ್ಥಾಪಕರು, ಜಿಲ್ಲೆಯ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕ್ರೀಡಾ ಕೂಟದ ಸಂಘಟಕರಾದ ಬಸವರಾಜ ಬಿರಾಜದಾರ ಎಲ್ಲರನ್ನು ಸ್ವಾಗತಿಸಿದರು, ಮಲಕಣ ಗೌಡ ಪಾಟೀಲ್ ವಂದಿಸಿದರು, ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು.