ಹುಣಸಗಿ: ಡಾ.ಸಿ ಎಸ್ ದ್ವಾರಕಾನಾಥ ಆಯೋಗ ವರದಿಯ ಬಗ್ಗೆ ಡಿಸೆಂಬರ್ ನಲ್ಲಿ ನಡೆಯುವ ಬೆಳಗಾವಿ ಸುವರ್ಣ ಸೌಧ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ಸುರಪುರ ಶಾಸಕರಾದ ರಾಜುಗೌಡರಿಗೆ ಕರ್ನಾಟಕ ಪಿಂಜಾರ/ನದಾಫ/ಮನ್ಸೂರಿ ಸಂಘಗಳ ಮಹಾಮಂಡಳದ ಕಲ್ಯಾಣ ಕರ್ನಾಟಕ ಘಟಕದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಸೋಪಿಸಾಬ ಡಿ ಸುರಪುರ,ಕಲ್ಯಾಣ ಕರ್ನಾಟಕ ಅಧ್ಯಕ್ಷ ಬಾವಾಸಾಬ ಅ ನದಾಫ ಪರಸನಳ್ಳಿ,ಸಂಘಟನಾ ಕಾರ್ಯದರ್ಶಿ ಹುಸೇನಸಾಬ ಎಂ ಗಾದಿ,ರಾಜು ಬಿ ನದಾಫ,ಇತರರು ಇದ್ದರು.