ಆಳಂದ; ಮಟಕಿ ಗ್ರಾಮದ ಬಹಳ ದಿನಗಳ ಬೇಡಿಕೆಯಾಗಿದ್ದ ಉಳಿದ ರಸ್ತೆ ಕಾಮಗಾರಿಯನ್ನು ಕೊಟ್ಟ ಮಾತಿನಂತೆ ಮಾಡಿಸುತ್ತಿದ್ದೇನೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಗುರುವಾರ ಆಳಂದ ತಾಲೂಕಿನ ಮಟಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ – ಇ ಅಡಿ ಮಂಜೂರಾದ ರೂ. 200.00 ಲಕ್ಷಗಳ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಮಟಕಿ ಗ್ರಾಮದ ಕೆರೆ ದುರಸ್ತಿ, ಗ್ರಾಮದ ಪರಿಶಿಷ್ಟ ಜಾತಿಯ ಓಣಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ, ಎಎನ್ಎಂ ಕೇಂದ್ರದಲ್ಲಿ ಕ್ಷೇಮಪಾಲನ ಕೇಂದ್ರ ನಿರ್ಮಾಣ, ಗ್ರಾಮದಿಂದ ಆಳಂದ ಸರ್ಕಾರಿ ಆಸ್ಪತ್ರೆಯವರೆಗೆ ರಸ್ತೆ ನಿರ್ಮಾಣ, ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಹೆಚ್ಚುವರಿ ಕೋಣೆಗಳ ನಿರ್ಮಾಣ, ಹನುಮಾನ ಗುಡಿಯ ಹತ್ತಿರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಸಮುದಾಯ ಭವನಗಳು ಸೇರಿದಂತೆ ಅನೇಕ ಕಾಮಗಾರಿಗಳನ್ನು ಗ್ರಾಮದಲ್ಲಿ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಬಸವರಾಜ ಕೆರೂರ, ಹಿರಿಯ ಮುಖಂಡರಾದ ವಿಠಲರಾವ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಮಲ್ಲಣ್ಣ ನಾಗೂರೆ, ಅಮೃತರಾವ ಪಾಟೀಲ, ಶ್ರೀಮಂತ ನಾಮಣೆ, ಶರಣಬಸಪ್ಪ ಬಿರಾದಾರ, ಪರಮೇಶ್ವರ ಶಿರೂರ, ಸೈಬಣ್ಣಪ್ಪ ಬಿರಾದಾರ, ಅಬ್ದುಲ, ನಂದು, ಸಿದ್ದರಾಮ ಶಿರೂರ, ಹಣಮಂತ ಬಿರಾದಾರ, ವಿಜಯಕುಮಾರ ಇಟಗಾರ, ರವಿ ಸೇವಾನಗರ ತಾಂಡಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.