ಸೇಡಂ : ಸುಲೇಪೇಟ ಗ್ರಾಮದ ನಿವೃತ ಪಿಡಿಓ ಗುರುನಾಥ ರೆಡ್ಡಿ ಹೂವಿನಭಾವಿ, ಮುಖಂಡರಾದ ಪಂಡಿತಕುಮಾರ ಹೂಗಾರ ಹಾಗೂ ಲಿಂಗಾಯತ ಸಮಾಜದ ಮುಖಂಡ ಶಿವಶರಣಪ್ಪ ಖ್ಯಾಮಾ ಅವರು ಸೇಡಂ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜು ನಿಲಂಗಿ, ಸುಲೇಪೇಟ ವಲಯ ಬಾಲರಾಜ್ ಗುತ್ತೇದಾರ ಬಿಗ್ರೇಡ್ ಅಧ್ಯಕ್ಷ ಮೋಹಿನ್ ಮೋಮಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು