ಬಾಲಕ ನಾಪತ್ತೆ ಆತಂಕದಲ್ಲಿ ಪೋಷಕರು

0
69

ಸುರಪುರ: ತಾಲ್ಲೂಕಿನ ಹಾವಿನಾಳ ಗ್ರಾಮದ ಆಕಾಶ ಪವಾರ್ (15 ವರ್ಷ) ಎಂಬ ಬಾಲಕ ಜುಲೈ 22ರಂದು ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಾರದ್ದರಿಂದ ಬಾಲಕನ ಪೋಷಕರು ತೀವ್ರ ಆತಂಕದಲ್ಲಿದ್ದಾರೆ.

ಕಾಣೆಯಾದ ಬಾಲಕ ಆಕಾಶ ಸುರಪುರದ ಡಾ:ಬಿ.ಆರ್.ಅಂಬೇಡ್ಕರ ಶಾಲೆಯಲ್ಲಿ ಒಂಬತ್ತನೆ ತರಗತಿ ಓದುತ್ತಿದ್ದು, ಶಾಲೆಗೆಂದು ಹೋದವನು ಮರಳಿ ಬರದಿದ್ದರಿಂದ ಗೆಳೆಯರ ರೂಮಲ್ಲಿ ಇರಬಹುದು ಬರಬಹುದೆಂದು ಎರಡು ಮೂರು ದಿನಗಳು ಕಾದು ನೋಡಿ,ಬರದಿದ್ದಾಗ ಸುರಪುರ ಠಾಣೆಗೆ ದೂರು ನೀಡಿ,ನಮ್ಮ ಮಗನನ್ನು ಯಾರೊ ಅಪಹರಿಸಿರುವ ಬಗ್ಗೆ ಅನುಮಾನ ಮೂಡುತ್ತಿದೆ.ಆದ್ದರಿಂದ ಕಳೆದು ಹೋದ ತಮ್ಮ ಮಗನನ್ನು ಹುಡುಕಿ ಕೊಡುವಂತೆ ಬಾಲಕನ ತಂದೆ ಬಲಭೀಮ ಪವಾರ್ ಅಂಗಲಾಚುತಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here