ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಲಕ್ಷ್ಮೀ ಶಕ್ತಿ ಪೀಠದ 36ನೇ ಸಂಭ್ರಮದ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಾವೈಕ್ಯ ಧರ್ಮಸಭೆಯಲ್ಲಿ ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ಕಲ್ಯಾಣ ಕರ್ನಾಟಕದ ಯುವ ಉದ್ಯಮಿ ಸುನಿಲ್ ಪಾಟೀಲ್ ಸರಡಗಿ ಅವರನ್ನು ಶ್ರೀ ಶಕ್ತಿ ಪೀಠ ಪ್ರಶಸ್ತಿ ನೀಡಿ ಗೌರವಿಸಿದರು. ಶ್ರೀ ಪರಮಪೂಜ್ಯರು ಅಪ್ಪಾರ ಸ್ವಾಮಿಗಳು, ಅನೇಕ ಗಣ್ಯರು ಹಾಜರಿದ್ದರು.