ಸುರಪುರ: ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣೆ ಅಕ್ರಮ ತಡೆಗಟ್ಟಲು ನಿರಂತರ ಪ್ರಯತ್ನ ಮಾಡುತ್ತಿರುವ ಪೊಲೀಸ್ ಇಲಾಖೆ ಕ್ಷೇತ್ರದಲ್ಲಿ ಯಾವುದೇ ಹಣ ಮದ್ಯ ಮತ್ತಿತರೆ ವಸ್ತುಗಳು ಸರಬರಾಜಾಗದಂತೆ ತೀವ್ರ ನಿಗಾ ಆರಂಭಿಸಿದ್ದಾರೆ.
ಭಾನುವಾರ ಮದ್ಹ್ಯಾನ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಡಿವೈಎಸ್ಪಿ ಡಾ:ಮಂಜುನಾಥ ಟಿ ಹಾಗೂ ಪಿಐ ಆನಂದ ವಾಘಮೊಡೆ ನೇತೃತ್ವದಲ್ಲಿ ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳ ನೆರವಿನೊಂದಿಗೆ ಪ್ರತಿಯೊಂದು ವಾಹನದ ತಪಾಸಣೆಯನ್ನು ನಡೆಸಿದರು.
ವಾಹನಗಳ ದಾಖಲಾತಿ ಪರಿಶೀಲನೆ ಜೊತೆಗೆ ವಾಹನ ಸವಾರರ ಪ್ರಯಾಣದ ಕುರಿತು ಮಾಹಿತಿಯನ್ನು ಪಡೆಯುವ ಮೂಲಕ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸದಂತೆ ಎಚ್ಚರಿಕೆಯ ಸಂದೇಶವನ್ನು ನೀಡಿದರು.