ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ 73ನೇ ಸ್ವತಂತ್ರ್ಯ ದಿನಾಚರಣೆ

0
87

ಕಲಬುರಗಿ: ನಗರದ ಕಾರ್ಮಿಕ ಇಲಾಖೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕಾರ್ಮಿಕ ಇಲಾಖೆಯ ಸಹಾಯಕ ಅಯುಕ್ತ ಹಾಗೂ ಆಯುಕ್ತರಾದ ಆರತಿ ಪೂಜಾರಿ ಮಾಹತ್ಮ ಗಾಂಧಿಯವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಉಪ ಕಾರ್ಮಿಕ ಆಯುಕ್ತರಾದ ಗಿರೀಶ ಎಸ್ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಪಡೆಯ ಬೇಕಾದರೆ ಲಕ್ಷಾಂತರ ಜನರ ತ್ಯಾಗ ಬಲಿದ ಕೊಡುಗೆ ಆಗಿದ್ದು ಅವರ ತ್ಯಾಗವನ್ನು ಪ್ರತಿದಿನ ಸ್ಮರಿಸುವ ಹಾಗೂ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

Contact Your\'s Advertisement; 9902492681

ಇಂದು ನೆರೆ ಹಾವಳಿಯಿಂದ ನಾಡಿನ ಜನರು ಅತ್ಯಂತ ಕಷ್ಟದಲ್ಲಿ ಅವರ ಬದುಕು ಸಾಗಿಸುತ್ತಿದ್ದಾರೆ ಅವರಿಗೆ ಸಾಹಾಯ ಹಸ್ತ ನೀಡುವದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಳಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಸಹಾಯಕ ಕಾರ್ಮಿಕ ಅಧಿಕಾರಿಗಳಾದ ರವೀಂದ್ರಕುಮಾರ ಬಲ್ಲೂರು , ರಮೇಶ ಸುಂಬಡ  ಸೇರಿದಂತೆ ಇಲಾಖೆ ಎಲ್ಲಾ ಸಿಂಬಂದಿಗಳು ಉಪಸ್ಥಿತರಿದ್ದರು …

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here