ಕಲಬುರಗಿ: ನಾನು ಜನ್ಮ ನೀಡಿ ನಿಮ್ಮ ಊಡಿಯಲ್ಲಿ ಹಾಕಿದ್ದೇನೆ. ಬೆಳೆಸುವ ಜವಾಬ್ದಾರಿ ತಾಲ್ಲೂಕಿನ ಜನರ ಮೇಲೆ ಇದೆ. ನಮ್ಮ ಕುಟುಂಬಕ್ಕೆ ಮೋಸ ಮಾಡಿದವರಿಗೆ ನೀವೇ ಉತ್ತರ ಕೊಡಬೇಕು. ಅಳುವೇ ನನ್ನ ಉತ್ತರವಾಗಿದೆ ಎಂದು ಟಿಕೆಟ್ ವಂಚಿತ ಮಾಜಿ ಜೇವರ್ಗಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳಿ ಅವರ ತಾಯಿ ಮಲ್ಲಮ್ಮಗೌಡತಿ ಶಿವಲಿಂಗಪ್ಪಗೌಡ ನರಿಬೋಳ ಹೇಳಿದರು.
ಬುಧುವಾರ ಪಟ್ಟಣದ ಬೂತಪುರ ಕಲ್ಯಾಣ ಮಂಟಪದಲ್ಲಿ ಕರೆದ ಸಭೆಯಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರ ಮುಂದೆ ಮಾತನಾಡಿದರು.
ಪ್ರಮುಖವಾಗಿ ರಮೇಶ ಬಾಬು ವಕೀಲˌ ದಂಡಪ್ಪ ಸಾಹು ಕರಳಗೇರಿˌ ಸುರೇಶ ಸುಂಬಡˌ ಸಿದ್ದಣ್ಣ ಹೂಗಾರˌ ಸಾಯಬಣ್ಣ ದೊಡ್ಮನಿˌ ಶಿವಾನಂದ ಮಾಕಾˌ ನಾನಾಗೌಡ ಅಲ್ಲಾಪುರˌ ದೇವಿಂದ್ರಪ್ಪಗೌಡˌ ಪುಂಡಲಿಕ ಗಾಯಕವಾಡˌ ಚಂದ್ರಕಾಂತ ಕುಸ್ತಿˌ ಸೇರಿದಂತೆ ಇತರರು ಇದ್ಡರು.
ಬಿಜೆಪಿ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಪಕ್ಷದ ವಿರುದ್ಧ ಮಂಗಳವಾರ ರಾತ್ರಿಯೇ ಭಂಡಾಯದ ಭಾವುಟ ಎದ್ದಿದ್ದು, ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಜೇವರ್ಗಿ ಪಟ್ಟಣದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳರವರ ಬೆಂಬಲಿಗರು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದರು.