ಕಲಬುರಗಿ: ಉತ್ತರ ಮತಕ್ಷೇತ್ರದ ಅಭ್ಯರ್ಥಿ ಚಂದು ಪಾಟೀಲ್ ಹಾಗೂ ನಗರ ಜಿಲ್ಲಾಧ್ಯಕ್ಷ ಸಿದ್ದಾರ್ಜಿ ಪಾಟೀಲ್ ಅವರ ನೇತೃತ್ವದಲ್ಲಿ ಸಮಾಜ ಸೇವಕ ಗಜಾನನ್ ದೇಶಪಾಂಡೆ ಹಾಗೂ ನೂರಾರು ಬೆಂಬಲಿಗರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಅಶೋಕ ಮಾನಕರ್, ಉಮೇಶ ಪಾಟೀಲ, ಶಿವಾನಂದ ಪಿಸ್ತಿ, ಮಹೇಶ ಚವ್ಹಾಣ, ನೂರ್ ಅಹ್ಮದ್, ತಾಹೇರ ಪಟೇಲ್, ಮುಸ್ತಾಫಾ ಇದ್ದರು.