ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ಮತ್ತು ಕಲಬುರಗಿ ಉತ್ತರ ಮತಕ್ಷೇತ್ರ ಶಾಸಕಿ ಕನೀಜ್ ಫಾತಿಮಾ ರವರ ಶಿಫಾರಸ್ಸು ಮೇರೆಗೆ ಉತ್ತರ ಮತಕ್ಷೇತ್ರದ ಶಾಹಬಜಾರ ಬ್ಲಾಕ್ನ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಂದಕುಮಾರ ನಾಗಭುಜಂಗೆ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ಕಲಬುರಗಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ, ಕಾಂಗ್ರೇಸ್ ಮುಖಂಡರಾದ ಫರಾಜುಲ್ ಇಸ್ಲಾಂ, ಮಜರ ಆಲಂಖಾನ್, ರಾಜು ಕಪನೂರ, ಹಣಮಂತ ಒಂಟಿ ಸೇರಿದಂತೆ ಇತರರು ಇದ್ದರು.