ಬಸವ ಜಯಂತಿಯಂದು ಅಶ್ವಾರೂಢ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ

0
13

ಸುರಪುರ:ಇದೇ ಏಪ್ರಿಲ್ 23ನೇ ತಾರೀಖು ಮುಂಜಾನೆ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಬಳಿಯ ಮುಖ್ಯ ರಸ್ತೆಯಲ್ಲಿ ನೂತನವಾದ ಅಶ್ವಾರೂಢ ಬಸವೇಶ್ವರರ ಪುತ್ಥಳಿಯನ್ನು ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ:ಸುರೇಶ ಸಜ್ಜನ್ ತಿಳಿಸಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,22ನೇ ತಾರೀಖು ಬಸವೇಶ್ವರರ ಪುತ್ಥಳಿ ಸೋಲಾಪುರ ದಿಂದ ಕೆಂಭಾವಿ ಮೂಲಕ ನಗರಕ್ಕೆ ತರುವಾಗ ಕೆಂಭಾವಿಯಲ್ಲಿ ಪುತ್ಥಳಿಯ ಮೆರವಣಿಗೆ ಹಾಗೂ ಮುದನೂರ,ಗುಂಡಲಗೇರಾ ಮಾರ್ಗವಾಗಿ ಹುಣಸಗಿಗೆ ಬಂದು ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತ ದಿಂದ ಬಸವೇಶ್ವರ ವೃತ್ತದ ವರೆಗೆ ಭವ್ಯವಾದ ಮೆರವಣಿಗೆ ನಡೆಯಲಿದೆ,ನಂತರ ಅಲ್ಲಿಂದ ಸುರಪುರ ನಗರಕ್ಕೆ ತರಲಾಗುವುದು.

Contact Your\'s Advertisement; 9902492681

ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪಂಚಾಂಗ ಮಠದಲ್ಲಿ ಬಸವ ಜಯಂತಿಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಪಂಚಾಂಗಮಠದ ಸ್ವಾಮೀಜಿಗಳು ಹಾಗೂ ಇತರೆ ಮುಖಂಡರು ಪುತ್ಥಳಿಗೆ ಪೂಜೆ ನೆರವೇರಿಸಿದ ನಂತರ ವೀರಶೈವ ಕಲ್ಯಾಣ ಮಂಟಪದ ವರೆಗೂ ರಾತ್ರಿ 9 ಗಂಟೆಯ ವರೆಗೆ ಮೆರವಣಿಗೆ ನಡೆಯಲಿದೆ.

ನಂತರ 23ನೇ ತಾರೀಖು ಬಸವ ಜಯಂತಿಯಂದು ಮುಂಜಾನೆ 9 ಗಂಟೆಗೆ ಪುತ್ಥಳಿಗೆ ಪೂಜೆ ನೆರವೇರಿಸಿ ಪ್ರತಿಷ್ಠಾಪಿಸಲಾಗುವುದು. ಪೂಜೆಯ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸುರಪುರ ಮತ್ತು ಹುಣಸಗಿ ತಾಲೂಕಿನ ಸಮಸ್ತ ವೀರಶೈವ ಲಿಂಗಾಯತ ಬಂಧುಗಳು ಹಾಗೂ ಬಸವೇಶ್ವರರ ಅನುಯಾಯಿಗಳು ಹಾಗೂ ಅಭಿಮಾನಿಗಳ ಸಹಭಾಗಿತ್ವದಲ್ಲಿ ನಗರದಾದ್ಯಂತ ಕಾರು ಮತ್ತು ಬೈಕ್‍ಗಳ ಬೃಹತ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.ಅಲ್ಲದೆ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ನಂತರದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವಲಿಂಗಪ್ಪ ಪಾಟೀಲ್,ವೀರಪ್ಪ ಆವಂಟಿ,ಶಿವರಾಜಪ್ಪ ಗೋಲಗೇರಿ,ಮನೋಹರ ಜಾಲಹಳ್ಳಿ,ಬಸವರಾಜಪ್ಪ ಜವiದ್ರಖಾನಿ,ಚಂದ್ರಶೇಖರ ದಂಡಿನ್,ಮಲ್ಲಣ್ಣ ಸಾಹು,ಜಯಲಲಿತಾ ಪಾಟೀಲ್,ಸಂಗಣ್ಣ ಎಕ್ಕೆಳ್ಳಿ,ಶಿವಶರಣಪ್ಪ ಹೆಡಗಿನಾಳ,ಪ್ರಕಾಶ ಅಂಗಡಿ,ಮಂಜುನಾಥ ಜಾಲಹಳ್ಳಿ,ಚಂದ್ರಶೇಖರ ಡೋಣೂರ,ವಿರೇಶ ನಿಷ್ಠಿ ದೇಶಮುಖ,ಮಂಜುನಾಥ ಗುಳಗಿ,ವಿರೇಶ ಪಂಚಾಂಗಮಠ,ಸಿದ್ದನಗೌಡ ಪಾಟೀಲ್,ಜಗದೀಶ ಪಾಟೀಲ್,ಪ್ರದೀಪ ಕದರಾಪುರ,ಅನ್ನಪೂರ್ಣ ಜಕ್ಕರೆಡ್ಡಿ,ಚಂದ್ರಕಾಂತ ಸಕ್ಕರಿ,ವಸಂತಕುಮಾರ ಬಣಗಾರ,ರವಿಗೌಡ ಹೆಮನೂರ,ಗುರು ಕಲ್ಮನಿ,ಅಂಬ್ರೇಶ ಸಾಹು ಜಾಲಿಬೆಂಚಿ,ಶರಣು ಬಳಿ,ರಾಘವೇಂದ್ರ ಲಕ್ಷ್ಮೀಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here