ಕಲಬುರಗಿ ದಕ್ಷಿಣದಲ್ಲಿ ಪ್ರಿಯಾಂಕ್ ಖರ್ಗೆ ಮಹತ್ವದ ಸಭೆ

0
24

ಕಲಬುರಗಿ; ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳಾಗಿರುವ ಅಲ್ಲಂಪ್ರಭು ಪಾಟೀಲರ ಪರವಾಗಿ ಕಾಂಗ್ರೆಸ್ (kpcc) ಸೋಸಿಸಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರು, ಮಾಜಿ ಸಚಿವರುಆದಂತಹ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ. ದಕ್ಷಿಣ ಮತಕ್ಷೇತ್ರದ ಎಲ್ಲಾ ಬೂತ್‍ಗಳಲ್ಲಿ ಹೇಗೆ ಕೆಲಸವಾಗಬೇಕು, ಜನ ಸಂಪರ್ಕ ಹೇಗಿದ್ದರೆ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ ಎಂಬಿತ್ಯಾದಿ ಸಂಗತಿಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

ಇದಲ್ಲದೆ ದಕ್ಷಿಣ ಮತಕ್ಷೇತ್ರದಲ್ಲಿರುವ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಪಕ್ಷದ ಪರ ಬಿರುಸಿನ ಪ್ರಚಾರಕ್ಕೆ ಮುಂದಾಗಬೇಕು, ಮನೆ ಮನೆ ಸಂಚರಿಸಿ ಅಲ್ಲಂಪ್ರಭು ಪಾಟೀಲರ ಪರವಾಗಿ ಮತ ಯಾಚಿಸಬೇಕು.

Contact Your\'s Advertisement; 9902492681

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಜನೆಗೆ ತಿಳಿಸಬೇಕು ಎಂದೂ ಪ್ರಿಯಾಂಕ್ ಖರ್ಗೆ ಪಕ್ಷದ ಕಾರ್ಯಕರ್ತರಿಗೆ ದಕ್ಷಿಣ ಮತಕ್ಷೇತ್ರದಲ್ಲಿ ಸೂಚನೆ ನೀಡಿದ್ದಾರೆ. ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್, ಅಭಿಷೇಕ ಪಾಟೀಲ್, ಪ್ರಸಾಂತ ಕೋರಳ್ಳಿ ಸೇರಿದಂತೆ ಪ್ರಮುಖರು ಅನೇಕರು ಸಭೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here