ಒಂದು ಅವಕಾಶ ಜೆಡಿಎಸ್‌ಗೆ ಕೊಟ್ಟು ನೋಡಿ ಸೇಡಂ ಮಾದರಿ ಕ್ಷೇತ್ರಕ್ಕೆ ಶ್ರಮಿಸುವೆ: ಬಾಲರಾಜ್‌ ಗುತ್ತೇದಾರ

0
23

ಸೇಡಂ : ಮತಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಕ್ಕೆ ಅವಕಾಶ ಕೊಟ್ಟು ಆಡಳಿತ ನೋಡಿದ್ದಿರಿ. ಒಂದು ಅವಕಾಶ ಜೆಡಿಎಸ್ ಪಕ್ಷಕ್ಕೆ ಕೊಟ್ಟು ನೋಡಿ ರಾಜ್ಯದಲ್ಲಿಯೆ ಮಾದರಿ ಕ್ಷೇತ್ರ ಮಾಡಿತೋರಿಸುತ್ತೇನೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಹೇಳಿದ್ದರು.

ಸೇಡಂ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಹನುಮನಹಳ್ಳಿ, ಕೊಡ್ಲಾ ಗ್ರಾಮದ ನೂರಾರು ಜನರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು ರೈತರಿಗೆ, ವಿದ್ಯಾರ್ಥಿಗಳಿಗೆ, ಬಡವರಿಗೆ, ಕೂಲಿಕಾರ್ಮಿಕರ ಪರವಾಗಿ ಅನೇಕ ಯೋಜನೆಗಳು ಜಾರಿಗೆ ತರುತ್ತೇನೆ.

Contact Your\'s Advertisement; 9902492681

ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಜೆಡಿಎಸ್ ಪಕ್ಷದ ಗೆಲುವಿಗೆ ಒಗ್ಗೂಡಿ ಶ್ರಮಿಸೋಣ ಜೊತೆಗೆ ಸೇಡಂ ಮತಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಸ್ಥಳೀಯ ಸಿಮೆಂಟ್ ಕಾರ್ಖಾನೆಗಳಲ್ಲಿ ಉದ್ಯೊಗ ನೀಡಲು ಶ್ರಮೀಸಲಾಗುವುದು , ಇಗಾಗಲೆ ಮತಕ್ಷೇತ್ರದ ಜನರ ಸಮಸ್ಯೆ ಅರಿಯಲು ಕ್ಷೇತ್ರದ 133 ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಂಡು ಜನರ ಸಮಸ್ಯೆ ಆಲಿಸಿ ಅನೇಕ ಸಮಸ್ಯೆಯನ್ನು ಬಗೆಹರಿಸುವ ಕೇಲಸ ಮಾಡಿದ್ದೆವೆ ಎಂದರು.

ಈ ವೇಳೆ ಸೇರ್ಪಡೆ ಆಗಿದ್ದವರು. ರವಿ, ಭೀಮಾಶಾಪ್ಪ, ಶಂಕರ ಗುತ್ತೇದಾರ್, ಕೃಷ್ಣಪ್ಪ, ದೇವು, ಪ್ರಕಾಶ್, ರಾಜು, ನರಸಯ್ಯ, ಶರಣಯ್ಯ, ಪ್ರವೀಣ್, ಬಂಗಾರಪ್ಪ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸುನೀತಾ ತಳವಾರ, ಶಂಭುಲಿಂಗ ನಾಟೇಕಾರ, ಭೀಮರಾಯ ಹನಮನಳ್ಳಿ, ಓಂಕಾರ್ ಮೋಹನ, ಡಾ. ಸುಶೀಲ್ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here