ಕಲಬುರಗಿ: ನಗರದ ಬಿಜೆಪಿ ವಿಭಾಗೀಯ ಮಾಧ್ಯಮ ಕೇಂದ್ರದಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ ಅವರು ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ನಂತರ ಮಾತನಾಡಿ ಬೆಂಗಳೂರಿನ ನಂತರ ಕಲಬುರಗಿ ನಂ.1 ಸಿಟಿ ಮಾಡುವ ಗುರಿ ಹೊಂದಿದ್ದೆವೆ, ಯುವಕರ ಹೆಚ್ಚು ಉದ್ಯೋಗಾವಕಾಶಗಳನ್ನು, ಕಲಬುರಗಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡವ ಕಾರ್ಯ ಇದಾಗಿದೆ ಎಲ್ಲರು ಸಹಕರಿಸಿ ಎಂದರು.
ಇದೆ ವೇಳೆ ವಿಧಾನ ಪರಿಷತ್ ಸದಸ್ಯರಾದ ಶಶಿಲ ನಮೋಶಿ ಅವರು ಮಾತನಾಡಿ ಈ ಬಾರಿ ಎಲ್ಲರು ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಅಧ್ಯಕ್ಷರು ಸಿದ್ದಾಜಿ ಪಾಟೀಲ್, ಮಾಜಿ ಜಿಡಿಎ ಅಧ್ಯಕ್ಷರು ದಯಾಗನ್ ದಾರವಾಡಕರ್, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶಿವಯೋಗಿ ನಾಗನಳ್ಳಿ ಉಪಸ್ಥಿತರಿದ್ದರು.