ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯೋನ್ ಕಾರಿನ ಮೇಲೆ ದಾಳಿ

0
29

ಸುರಪುರ: ನಗರದ ಆನಂದ ವಿದ್ಯಾಲಯ ಬಳಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯೋನ್ ಅವರ ಕಾರಿನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಶನಿವಾರ ರಾತ್ರಿ ನಗರದ ಆನಂದ ವಿದ್ಯಾಲಯ ಬಳಿಯಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಆಗಮಿಸಿದ್ದರು,ನಗರಕ್ಕೆ ಆಗಮಿಸಿದ ನಂತರ ಸಂಬಂಧಿಕರ ಮನೆಗೆ ಹೋಗುವಾಗ ಜೊತೆಯಲ್ಲಿ ಸ್ಥಳಿಯ ನಗರಸಭೆ ಸದಸ್ಯ ಮಹ್ಮದ್ ಷರೀಫ್ ಹಾಗೂ ವಕೀಲ ಅಬ್ದುಲ್ ಜಲೀಲ (ಬಾಬಾ) ಎನ್ನುವವರನ್ನು ಕರೆದುಕೊಂಡು ಹೋಗಿದ್ದರು.

Contact Your\'s Advertisement; 9902492681

ರಾತ್ರಿ 10 ಗಂಟೆಯ ವೇಳೆಗೆ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ಮರಳಿ ಬರುವಾರಗ ಆನಂದ ವಿದ್ಯಾಲಯದ ಗೇಟ್ ಬಳಿಯಲ್ಲಿ ಆರು ಜನರ ಗುಂಪು ಡೇವಿಡ್ ಸಿಮಿಯೋನ್ ಅವರ ಕಾರನ್ನು ತಡೆದು ಅವಾಚ್ಯವಾಗಿ ನಿಂದಿಸಿ ಕಾರಿನ ಗಾಜು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಿದ್ದ ಆರು ಜನರ ಗುಂಪು ತಮ್ಮ ಮೇಲೆ ಮತ್ತು ವಕೀಲ ಬಾಬಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯ ಮಹ್ಮದ ಶರೀಫ್ ದೂರು ನೀಡಿದ್ದು ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here