ಶರಣ ತತ್ವ ಸರ್ವಕಾಲಕ್ಕು ಪ್ರಸ್ತುತ: ಲಕ್ಷ್ಮೀಪುರ ಶ್ರೀ

0
54

ಸುರಪುರ: ಬಸವಾದಿ ಶರಣರು ಈ ನಾಡಿಗೆ ಬಳುವಳಿಯಾಗಿ ನೀಡಿದ ಶರಣತತ್ವ ಚಿಂತನೆಗಳು ಸರ್ವಕಾಲಕ್ಕು ಪ್ರಸ್ತುತವಾಗಿವೆ ಎಂದು ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ತಾನದ ಪೂಜ್ಯಶ್ರೀ ಬಸವಲಿಂಗಯ್ಯ ಸ್ವಾಮಿಗಳು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸುರಪುರ ತಾಲೂಕ ಘಟಕದ ವತಿಯಿಂದ ಶ್ರೀ ಮಠದಲ್ಲಿ ಇಂದು ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಯುವ ಜನಾಂಗ ಮತ್ತು ವಿಧ್ಯಾರ್ಥಿ ಸಮುದಾಯ ಶರಣತತ್ವ ಚಿಂತನೆ, ವಚನ ಸಾಹಿತ್ಯ, ಅಭ್ಯಾಸಿಸುವುದು ಅತ್ಯಂತ ಅವಶ್ಯಕವಾಗಿದ್ದು ಆ ದಿಶೆಯಲ್ಲಿ ಕಳೆದ ೩ ದಶಕಗಳಿಂದ ಶರಣ ಸಾಹಿತ್ಯ ಪರಿಷತ್ ಕಾರ್ಯಾನಿರ್ವಹಿಸುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ ಎಂದ ಅವರು ಬರುವ ದಿನಗಳಲ್ಲಿ ಶ್ರೀ ಮಠದ ಮೂಲಕ ೧೦೦ ಜನ ಸದಸ್ಯರನ್ನು ಶರಣ ಸಾಹಿತ್ಯ ಪರಿಷತ್ತಿಗೆ ನೊಂದಾಯಿಸಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ ತಾಲೂಕ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಸೂತ್ತುರು ಶ್ರೀ ಮಠದ ಪೂಜ್ಯ ಲಿಂ. ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಜಿಗಳ ದೂರದೃಷ್ಟಿಯ ಫಲವಾಗಿ ಉದಯಿಸಿರುವ ಶರಣ ಸಾಹಿತ್ಯ ಪರಿಷತ್ತು ಕರ್ನಾಟಕ ಪ್ರತಿ ಜಿಲ್ಲೆ, ತಾಲೂಕು, ಹೊಬಳಿ, ವಲಯ ಘಟಗಳನ್ನು ಹೊಂದಿ ಕಾರ್ಯನಿರ್ವಹಿಸುವುದರ ಜೊತೆಗೆ ಕರ್ನಾಟಕದ ಆಚೆಗೆ ಅನೇಕ ಹೊರನಾಡು ಮತ್ತು ಗಡಿನಾಡು ಘಟಕಗಳನ್ನು ಹೊಂದಿ ಶರಣ ಪ್ರಸಾರದಲ್ಲಿ ತೊಡಗಿಕೊಂಡಿದೆ ಅಲ್ಲದೆ ಗೊ.ರು.ಚನ್ನಬಸಪ್ಪ, ಚಂದ್ರಕಾಂತ ಬೆಲ್ಲದ, ಬಸವರಾಜ ಸಾದರ, ಅಪ್ಪಾರಾವ ಅಕ್ಕೊಣಿ, ಜರಗನಳ್ಳಿ ಶಿವಶಂಕರ ಇವರುಗಳ ಪ್ರಯತ್ನದ ಫಲವಾಗಿ ರಾಜ್ಯದ ತುಂಬಾ ಕ್ರೀಯಾಶಿಲವಾಗಿ ಕಾರ್ಯಾನಿರ್ವಹಿಸುತ್ತಿದೆ ಅನೇಕ ಸಮ್ಮೇಳನ, ಸಮಾರಂಭ, ಕಾರ್ಯಾಗಾರ, ವಿಚಾರ ಸಂಕಿರ್ಣ, ಉಪನ್ಯಾಸ, ಸಂವಾದಗಳ ಮೂಲಕ ಜನಮಾನಸವಾಗಿರುವ ಶರಣಸಾಹಿತ್ಯ ಪರಿಷತ್ತು ರಾಜ್ಯದ ತುಂಬಾ ಸದಸ್ಯತ್ವ ಅಭಿಯಾನ ನಡೆಸುತ್ತಾ ಕ್ರೀಯಾಶಿಲವಾಗಿ ಕಾರ್ಯಾನಿರ್ವಹಿಸುತ್ತುದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವಶರಣಪ್ಪ ಹೆಡಿಗಿನಾಳ, ವಿರಭದ್ರಪ್ಪ ಕುಂಬಾರ, ಶಿವರಾಜ ಕಲಿಕೇರಿ, ಶಾಂತುನಾಯಕ, ಅಂಬ್ರೇಶ ಕುಂಬಾರ, ಬಸವರಾಜ ಚನ್ನಪಟ್ನ, ಅಂಬರೇಶ ಪರತಾಬಾದ ಸೇರಿದಂತೆ ಇತರರು ಇದ್ದರು. ಮೌನೇಶ ಐನಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here