ನೀರು ಕುಡಿಯಲು ಹೋಗಿ ಇಬ್ಬರು ಬಾಲಕರು ನದಿ ಪಾಲು

0
480

ಕಲಬುರಗಿ: ನದಿಯ ನೀರು ಕುಡಿಯಲು ಹೋಗಿ ಬಾಲಕರಿಬ್ಬರು ಭೀಮಾ ನದಿಯ ಪಾಲದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನಾಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

ರಾಮು ತಂದೆ ಅನಿಲಕುಮಾರ ದೊಡ್ಡಮನಿ (12) ಹಾಗೂ ದೇವು ತಂದೆ ಜೆಟ್ಟೆಪ್ಪ ಹೊಸಮನಿ (17) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

Contact Your\'s Advertisement; 9902492681

ಬಾಲಕರು ನೀರು ಕುಡಿಯುವ ಸಂದರ್ಭದಲ್ಲಿ ರಾಮು ಎಂಬ ಬಾಲಕ ಪಾಚಿ ಮೇಲೆ ಕಾಲು ಇಟ್ಟ ವೇಳೆ ಕಾಲು ಜಾರಿ ನದಿಯಲ್ಲಿ ಬಿದ್ದಾಗ, ರಾಮುನನ್ನು ರಕ್ಷಿಸಲು ಹೋದ ದೇವು ಎಂಬ ಬಾಲಕ ಸಹ ನದಿಯಲ್ಲಿ ಮುಳುಗಿ ಅಸುನಿಗಿದ್ದಾರೆ. ಇಬ್ಬರು ಜೇವರ್ಗಿ ತಾಲೂಕಿನ ಕೋನಾಹಿಪ್ಪರಗಿ ಗ್ರಾಮದವರಾಗಿದ್ದಾರೆ.

ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಜೇವರ್ಗಿ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here