ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ವತಿಯಿಂದ ಹಮ್ಮಿಕೊಂಡ ಕೇಂದ್ರ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಉಪಪಂಗಡಗಳ ಒಟ್ಟಾಗಿ ಸೇರಿಸಲು ಕೇಂದ್ರ ಸರಕಾ ರಕ್ಕೆ ಹಕ್ಕೊತ್ತಾಯದ ಸಮಾವೇಶವನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜಿ ದೊಡ್ಡಪ್ಪ ಅಪ್ಪ ಉದ್ಘಾಟಿಸಿದರು.
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸುತ್ತೂರ ಸಂಸ್ಥಾನದ ಅಧ್ಯಕ್ಷ ನಂದೀಶ ಹಂಚಿ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಿ.ಆರ್.ಪಾಟೀಲ್ ಬಿ.ಜಿ.ಪಾಟೀಲ್, ಉಜ್ಜನಿ ಕಾಶಿ, ಶ್ರೀಶೈಲ್ ಶ್ರೀಗಳು ಸೇರಿದಂತೆ ಹಲವಾರು ಮಠಾಧೀಶರ ಮತ್ತು ಸಮಾಜದ ಮುಖಂಡರಾದ ಶರಣು ಮೋದಿ, ಬಸವರಾಜ ಭೀಮಳ್ಳಿ, ಎಂ.ಎಸ್.ಪಾಟೀಲ್ ನರಿಬೋಳ, ಬಸವರಾಜ ದೇಶಮುಖ, ಭೀಮಾಶಂಕರ ಬೀಲಗುಂದಿ, ಅರುಣಕುಮಾರ ಪಾಟೀಲ್ ಸೇರಿದಂತೆ ಇತರರಿದ್ದರು.