ಕಲಬುರಗಿ: ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಹಾಗೂ ಚೇತನ ಅಹಿಂಸಾ ಫೌಂಡೇಶನ್ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ನಗರದ ಕನ್ನಡ ಭವನದಲ್ಲಿ ನಡೆಯಿತು.
ಸ್ಲಂ ಜನಾಂದೋಲನ: ಕರ್ನಾಟಕದ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಅವರು ಸಮಾರಂಭ ಉದ್ಘಾಟಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಸಂಗೀತಾ ಎನ್. ಕೆ.ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಕಾರ ರಜಪೂತ, ಸದಾನಂದ, ಅಜೀಂಪ್ರೇಮದ ಸೌಂಡೇಶನ್ನ ವಿಭಾಗೀಯ ಸಂಲಕ ಮಹಾದೇವ, ಮೂಲಗೆ, ನ್ಯಾಯವಾದಿ ನಾಗೇಂದ್ರ ಜವಳಿ, ಸ್ಲಂ ಜನಾಂದೋಲನ ಜಿಲ್ಲಾ ಅಧ್ಯಕ್ಷೆ ಸುನಿತಾ ಎಂ.ಕೊಳ್ಳೂರ, ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ರತ್ನಮ್ಮ ದುತ್ತರಗಾಂವ, ಗೌರಮ್ಮ ಮಾಕಾ, ಹೀನಾ ಶೇಖ್, ರಾಶಿ ರಾಠೋಡ, ನೀಲಮ್ಮ, ಶ್ರೀದೇವಿ, ಕಲಾವತಿ, ಕು.ಸೌಭಾಗ್ಯ, ಕು.ಸೀಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.