ಮಕ್ಕಳಿಗೆ ಸಂಸ್ಕಾರ ಕಲಿಸಿ: ಸತೀಶ್

0
39

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ.ಟ್ರಸ್ಟ್ ಯೋಜನೆಯ ವತಿಯಿಂದ ಶುಕ್ರವಾರ ನಗರದ ಬಿದ್ದಾಪುರ ಕಾಲೋನಿಯ ಜಿಲ್ಲ‍ಾ ಕಚೇರಿಯಲ್ಲಿ ಸಮುದಾಯ ಜ್ಞಾನದೀಪ ಅತಿಥಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ನೀಡಲಾಯಿತು.

ಸರ್ಕಾರಿ ಸಂಪನ್ಮೂಲ ನೋಡಲ್ ಅಧಿಕಾರಿ ನಾಗಮೂರ್ತಿ ಅವರು ಪಾಠಯೋಜನೆ,ನಲಿ – ಕಲಿ ಸೇರಿ ವಿವಿಧ ಕೌಶಲ್ಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು.ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ,ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರ,ನೈತಿಕ ಮೌಲ್ಯ,ಪರಿಸರ ಜಾಗೃತಿ ಸೇರಿದಂತೆ ಹಲವು ಜಾಗೃತಿಯ ಕುರಿತು ಪಾಠಮಾಡಿ ಎಂದು ಶಿಕ್ಷಕರಿಗೆ ಕರೆ ನೀಡಿದರು.

Contact Your\'s Advertisement; 9902492681

ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ,ಪುಷ್ಪರಾಜ, ಪ್ರವೀಣ ಸೇರಿದಂತೆ ಹಲವರು ಇದ್ದರು.ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಶಿಕ್ಷಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here