ನಾಳೆ ಚಿತ್ತಾಪುರದಲ್ಲಿ ವಿಶೇಷ ಹೋಮ ಭಜನೆ

0
165

ಚಿತ್ತಾಪುರ: ಪಟ್ಟಣದ ಶಿವಶಂಕರ ಮಠದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಧಿಕ ಮಾಸ ನಿಮಿತ್ತ ಒಂದು ತಿಂಗಳವರೆಗೆ ವಿಶೇಷ ಹೋಮ ಹಾಗೂ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪುರೋಹಿತ ಬಳಗದ ಮುಖ್ಯಸ್ಥ ಮಂಜುನಾಥ ಶಾಸ್ತ್ರೀ ತಿಳಿಸಿದ್ದಾರೆ.

ಜುಲೈ 17 ರಿಂದ ಆಗಸ್ಟ್ 16 ರವರೆಗೆ ನಡೆಯುವ ಈ ಕಾರ್ಯಕ್ರಮ ಸೋಮವಾರ, ಗುರುವಾರ, ಭಾನುವಾರ ರಂದು ಸಾಯಂಕಾಲ 5:30ಕ್ಕೆ ವಿಶೇಷ ಹೋಮ ಕಾರ್ಯಕ್ರಮ ಹಾಗೂ ಅಕ್ಕನ ಬಳಗದವತಿಯಿಂದ ಪ್ರತಿದಿನ ಒಂದು ತಿಂಗಳವರೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ.

Contact Your\'s Advertisement; 9902492681

ಪ್ರತಿ ಸೋಮವಾರ ರುದ್ರ ಹೋಮ,ಮೃತ್ಯುಂಜಯ ಹೋಮ,ಪ್ರತಿ ಗುರುವಾರ ಗಣ ಹೋಮ,ವಿದ್ಯಾ ಸರಸ್ವತಿ ಹೋಮ,ಭಾನುವಾರ ನಾಗದೋಷ, ಮಂಗಳ ದೋಷ,ಗ್ರಹಗಳ ಶಾಂತಿ,ನಕ್ಷತ್ರ ಶಾಂತಿ ಕಾರ್ಯಕ್ರಮ ನಡೆಯಲಿದೆ. ಪೂಜೆಯಲ್ಲಿ ಪಾಲ್ಗೊಳ್ಳುವವರು ಮೊದಲು ಹೆಸರು ನೋಂದಾಯಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಜನರು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here