ಕಸಾಪದಿಂದ ಏರ್ಪಡಿಸಿದ ವಚನಜ್ಯೋತಿ ಯಾತ್ರೆ

0
87

ಕಲಬುರಗಿ: ಇದೊಂದು ಅಪರೂಪದ ಕಾರ್ಯಕ್ರಮ ಜಿಲ್ಲಾ ಕಸಾಪ ದಿಂದ ಏರ್ಪಡಿಸಿದ ವಚನಜ್ಯೋತಿ ಯಾತ್ರೆಗೆ ಸಮಾಜದ ಶುದ್ಧತೆಯಲ್ಲಿ ತೊಡಗಿಸಿಕೊಂಡಿರುವ ಚಮ್ಮಾರ ಕಾಯಕ ಮತ್ತು ಪೌರ ಕಾರ್ಮಿಕರಾದ ನಾಗೀಂದ್ರಪ್ಪ ಹೀರಾಪೂರ ಹಾಗೂ ಲಕ್ಷ್ಮೀ ಶರಣಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವ ಮೂಲಕ ವಚನಸಾಹಿತ್ಯದ ನಿಜವಾದ ಆಶಯವನ್ನು ಈಡೇರಿಸಿದಂತಾಗಿದೆ.

ವಚನ ಸಾಹಿತ್ಯವು ಸಾಮಾಜಿಕ ಚಳವಳಿಯಾಗಿದ್ದು ಪ್ರಸ್ತುತ ಸಮಾಜದ ಅಮಾನವೀಯ ಗುಣಗಳನ್ನು ಬದಲಾಯಿಸುವ ಪ್ರಯತ್ನವನ್ನು ಮಾಡಿಕೊಂಡು ಬಂದಿದೆ. ನಮ್ಮ ಮುಂದೆ ಇರುವ ಅನೇಕ ಸವಾಲುಗಳಿಗೆ ಉತ್ತರವನ್ನು ಕೊಡುವ ಪ್ರಯತ್ನವನ್ನೂ ಸಹ  ವಚನ ಸಾಹಿತ್ಯ ಮಾಡಿದೆ. ವಚನ ಸಾಹಿತ್ಯವು ಸಮಾನತೆಯನ್ನು ಪ್ರತಿಪಾದಿಸುತ್ತದೆ. ನಮ್ಮ ಬದುಕಿನ ಹಲವು ಇಂದಿನ ತಲ್ಲಣಗಳಿಗೆ ವಚನ ಸಾಹಿತ್ಯವು ಅತ್ಯಗತ್ಯವಾಗಿದೆ. ಪ್ರಸ್ತುತ ಸಮಾಜದಲ್ಲಿ ವಚನಗಳು ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯಂತ ಪೂರಕವಾಗಿದ್ದು, ಸಮಾಜಕ್ಕೆ ಉತ್ತಮ ಮಾರ್ಗದಶ್ನವನ್ನು ನೀಡುತ್ತದೆ ಎಂದು ಪಿಡಿಎ ಇಂಜೀನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಂಜಯ ಮಾಕಲ್ ಅವರು ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಂದ ಜಿಲ್ಲೆಯ ಕಾಳಗಿ ಪಟ್ಟಣದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ಸತ್ಯ ಚರಿತೆ ರಚನೆಯಲ್ಲಿ… ವಚನಜ್ಯೋತಿ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಹನ್ನೇರಡನೆಯ ಶತಮಾನದ ಬಸವಾದಿ ಶರಣರ ನಡೆ-ನುಡಿ, ಆಚಾರ-ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನಕ್ಕೊಂದು ಮೌಲ್ಯ ಬರುತ್ತದೆ. ಹಾಗಾಗಿ,  ಇಂದಿನ ವಿದ್ಯಾರ್ಥಿಗಳಲ್ಲಿ ವಚನ ಸಂಸ್ಕøತಿಯನ್ನು ಬಿತ್ತುವ ಮೂಲಕ ಪ್ರೀತಿ-ವಿಶ್ವಾಸದ ಹಾಗೂ ಸ್ವಾಭಿಮಾನದ ಬದುಕನ್ನು ರೂಢಿಸಿಕೊಳ್ಳಬೇಕೆಂಬುದುವುದೇ ಈ ವಚನಜ್ಯೊತಿ ಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ಈ ವಚನ ಚಳವಳಿ ರೂಪದ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ ಎಂದರು.

ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಶಾಂತಲಾ ಡಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಭೂದಾನಿ ಶಿವಶರಣಪ್ಪ ಕಮಲಾಪೂರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಳ್ಳಿ, ಕಾಳಗಿ ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ, ರಾಜೇಂದ್ರಬಾಬು ಹೀರಾಪೂರ, ವಿಶ್ವನಾಥ ತೊಟ್ನಳ್ಳಿ, ಚಿಂಚೋಳಿ ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಯಲ್ಲಾಲಿಂಗ ಪಾಟೀಲ, ಸತೀಶ ಸುಲೇಪೇಟ್, ಸಿದ್ದು ಕದಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಸ್ತುತ ಸಾಮಾಜಿಕ ಸಂದರ್ಭದ ಅನೇಕ ಜ್ವಲಂತ ಸಮಸ್ಯೆಗಳಿಗೆ ವಚನ ಸಾಹಿತ್ಯವು ಉತ್ತರವನ್ನು ನೀಡಿದೆ. ಮಾನವೀಯತೆಯನ್ನು ಬೆಳೆಸುವುದೇ  ನಿಜವಾದ ಹೋರಾಟವೆಮದು ತಿಳಿದುಕೊಂಡ ವಚನಕಾರರು ಮನಸ್ಸನ್ನು ಕಟ್ಟುವ ಕೆಲಸವನ್ನುಮಾಡಲು ಪ್ರಯತ್ನಿಸಿದ್ದಾರೆ. – ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷ, ಜಿಲ್ಲಾ ಕಸಾಪ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here