ಕಲಬುರಗಿ: ಗುಂಡಿಗೆ ಬಿದ್ದು ಇಬ್ಬರು ಬಾಲಕರ ಸಾವು

0
32

ಕಲಬುರಗಿ: ಮಳೆ ನೀರಿನಿಂದ ತುಂಬಿದ್ದ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ.

ಸಂಜಯಗಾಂಧಿ ನಗರದ ಅಭಿಷೇಕ ತಂದೆ ಸುರೇಶ ಕನ್ನೋಳ್ (12) ಮತ್ತು ಅಜಯ್ ತಂದೆ ಭೀಮರಾಯ ನೆಲೋಗಿ (12) ಮೃತ ಬಾಲಕರು. ದುಬೈ ಕಾಲೋನಿಯ ಮಕ್ಕಳ ಆಸ್ಪತ್ರೆ (ಹಳೇ ಕುಷ್ಠರೋಗಿ ಆಸ್ಪತ್ರೆ ಬಳಿ) ಮುಂಭಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಗ್ಗು ತೋಡಲಾಗಿದೆ. ಸತತ ಮಳೆಯಿಂದ ತಗ್ಗು ಸಂಪೂರ್ಣ ಭರ್ತಿಯಾಗಿದೆ. ನಿನ್ನೆ ಸಂಜೆ ಇಬ್ಬರು ಬಾಲಕರು ಆಟವಾಡಲು ಹೋಗಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸುದ್ದಿ ತಿಳಿದು ಚೌಕ್ ಠಾಣೆ ಪಿಐ ರಾಜಶೇಖರ ಹಳಿಗೋಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಮೃತ ಬಾಲಕರ ಪೋಷಕರು ಹಾಗೂ ಸಂಬಂಧಿಕರು ಸ್ಥಳದಲ್ಲಿ ರೋದಿಸಿದ್ದರು. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here