ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯಿಂದ ಸಾಧಕರಿಗೆ ಸನ್ಮಾನ ನಾಳೆ

0
58

ಕಲಬುರಗಿ; ಸ್ವಾಮಿ ವಿವೇಕಾನಂದ ನಗರದಲ್ಲಿನ ಶ್ರೀಮತಿ ಕಸ್ತೂರಿಬಾಯಿ ಪಿ ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ನಾಳೆ ಸಾಯಂಕಾಲ 5 ಕ್ಕೆ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ದರ್ಜೆ ಗುತ್ತೇದಾರ ಲಕ್ಷ್ಮೀಕಾಂತ ಜಮಾದಾರ ಉದ್ಘಾಟಿಸುವರು. ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಗೌರವಾಧ್ಯಕ್ಷ ಡಾ.ಬಿ.ಪಿ.ಬುಳ್ಳಾ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೌಢಶಾಲೆ ಮುಖ್ಯ ಗುರುಶಾಂತಪ್ಪ ಕೆ ಹೇರೂರ, ಕರ್ನಾಟಕ ರಾಜ್ಯ ಗಂಗಾಮಾತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಉಪಾಧ್ಯಕ್ಷ ಹೊನ್ನಪ್ಪ ಪಟೇದ, ರಾಜ್ಯ ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ಕೋಶ್ಯಾಧ್ಯಕ್ಷ ಶಿವಕುಮಾರ (ಪಿಂಟು) ಜಮಾದಾರ, ಶ್ರೀ ಕೋಕಿಲಾ ಪರಮೇಶ್ವರಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಜೋಕೆ ಆಗಮಿಸುವರು.

Contact Your\'s Advertisement; 9902492681

ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಾರ್ಯಾಧ್ಯಕ್ಷ ಸೈಬಣ್ಣಾ ಕೆ ವಡಗೇರಿ ಹಾಗೂ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಉಪಾಧ್ಯಕ್ಷ ರಾಮಲಿಂಗ ನಾಟೀಕಾರ ಇವರು ಗೌರವ ಉಪಸ್ಥಿತಿ ವಹಿಸುವರು, ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ರಾಘವೇಂದ್ರ ಗುಂಡಗುಂಟಿ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಶಾರದಾದೇವಿ ಕರ್ಣ ಬಿರಾದಾರ, ಪ್ರೌಢಶಾಲಾ ಮುಖ್ಯೋಪಾಧ್ಯರ ಸಂಘದ ಅಧ್ಯಕ್ಷ ಮರೇಪ್ಪ ಮಿಣಜಿಗಿ, ಕೆಎಂಎಫ್ ವಿಸ್ತರಣಾ ಅಧಿಕಾರಿ ಸುನಿತಾ ರಾಮಲಿಂಗ ನಾಟೀಕಾರ, ಡಾಕ್ಟರೇಟ್ ಪದವಿ ಪಡೆದ ಡಾ.ಕಾಶಮ್ಮಾ ಯಲ್ಲಾಲಿಂಗ ಇವರನ್ನು ವಿಶೇಷ ಸನ್ಮಾನಿಸುವರು ಎಂದು ಸಂಘದ ಪ್ರಧಾನ ಯಲಾಲಿಂಗ ಕೋಬಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here